<p><strong>ಬೆಂಗಳೂರು: </strong>‘ಸಂಸ್ಕೃತವು ನಾಗರಿಕತೆ ಯೊಂದಿಗೆ ಬೆಸೆದುಕೊಂಡಿದ್ದು, ಇದರತ್ತ ಯುವಜನತೆಯನ್ನು ಸೆಳೆಯಬೇಕಿದೆ’ ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಹೇಳಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.<br /> <br /> ‘ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು ಸಂಸ್ಕೃತವನ್ನು ಉಳಿಸುವ ತುರ್ತು ಅಗತ್ಯ ಎದ್ದು ಕಾಣುತ್ತಿದೆ. ಹೀಗಾಗಿ ಭರದಿಂದ ಸಂಸ್ಕೃತ ಉಳಿಸುವ ಕೆಲಸ ಮಾಡಬೇಕು’ ಎಂದರು.<br /> <br /> ‘ಕೇವಲ ಹಣ ಗಳಿಕೆಯ ಮಾರ್ಗವಾಗಿ ಶಿಕ್ಷಣವನ್ನು ಪಡೆಯಲಾಗುತ್ತಿದೆ. ವಿವೇಚನೆ ಹಾಗೂ ಮಾನವೀಯತೆ ಯನ್ನು ತಿಳಿದು ಕೊಳ್ಳುವತ್ತ ಶಿಕ್ಷಣವನ್ನು ರೂಪಿಸಬೇಕಿದ್ದು, ಇದಕ್ಕೆ ಸಂಸ್ಕೃತ ಭಾಷೆಯ ಅಗತ್ಯವಿದೆ’ ಎಂದು ಹೇಳಿದರು.<br /> <br /> ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕ ಟೇಶ್, ‘ವಿಶ್ವವಿದ್ಯಾಲಯದಲ್ಲಿ ₨ 8 ಕೋಟಿ ಸಂರಕ್ಷಣಾ ನಿಧಿ ಇದ್ದು, ಅದನ್ನು ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಯಲ್ಲಿ ಮಿತವಾಗಿ ಬಳಸಲಾಗುವುದು’ ಎಂದು ಹೇಳಿದರು.<br /> ‘ವಿ.ವಿಯು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಿದ್ದು, ಇದಕ್ಕೆ ಸರ್ಕಾರದ ನೆರವು ದೊರೆಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಸಂಸ್ಕೃತವು ನಾಗರಿಕತೆ ಯೊಂದಿಗೆ ಬೆಸೆದುಕೊಂಡಿದ್ದು, ಇದರತ್ತ ಯುವಜನತೆಯನ್ನು ಸೆಳೆಯಬೇಕಿದೆ’ ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಹೇಳಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.<br /> <br /> ‘ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು ಸಂಸ್ಕೃತವನ್ನು ಉಳಿಸುವ ತುರ್ತು ಅಗತ್ಯ ಎದ್ದು ಕಾಣುತ್ತಿದೆ. ಹೀಗಾಗಿ ಭರದಿಂದ ಸಂಸ್ಕೃತ ಉಳಿಸುವ ಕೆಲಸ ಮಾಡಬೇಕು’ ಎಂದರು.<br /> <br /> ‘ಕೇವಲ ಹಣ ಗಳಿಕೆಯ ಮಾರ್ಗವಾಗಿ ಶಿಕ್ಷಣವನ್ನು ಪಡೆಯಲಾಗುತ್ತಿದೆ. ವಿವೇಚನೆ ಹಾಗೂ ಮಾನವೀಯತೆ ಯನ್ನು ತಿಳಿದು ಕೊಳ್ಳುವತ್ತ ಶಿಕ್ಷಣವನ್ನು ರೂಪಿಸಬೇಕಿದ್ದು, ಇದಕ್ಕೆ ಸಂಸ್ಕೃತ ಭಾಷೆಯ ಅಗತ್ಯವಿದೆ’ ಎಂದು ಹೇಳಿದರು.<br /> <br /> ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕ ಟೇಶ್, ‘ವಿಶ್ವವಿದ್ಯಾಲಯದಲ್ಲಿ ₨ 8 ಕೋಟಿ ಸಂರಕ್ಷಣಾ ನಿಧಿ ಇದ್ದು, ಅದನ್ನು ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಯಲ್ಲಿ ಮಿತವಾಗಿ ಬಳಸಲಾಗುವುದು’ ಎಂದು ಹೇಳಿದರು.<br /> ‘ವಿ.ವಿಯು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಿದ್ದು, ಇದಕ್ಕೆ ಸರ್ಕಾರದ ನೆರವು ದೊರೆಯಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>