ಮೇಕೆದಾಟುವಿನಲ್ಲಿ ಅಣೆಕಟ್ಟುಗಳನ್ನು ಕಟ್ಟುವುದನ್ನು ತಮಿಳುನಾಡು ಸರ್ಕಾರ ವಿರೋಧಿಸಿದ್ದನ್ನು ಪ್ರತಿಭಟಿಸಿ ಇಡೀ ರಾಜ್ಯದಲ್ಲಿ 700ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿದವು. ಬೀದಿಯಲ್ಲಿ ನಿತ್ಯ ತರಕಾರಿಯನ್ನು ಮಾರಿ ಹೊಟ್ಟೆ ಹೊರೆಯಬೇಕಾದ ಬಡವನಿಂದ ಹಿಡಿದು, ಮಾಲ್ಗಳನ್ನು ನಡೆಸಿ ಲಕ್ಷಾಂತರ ಗಳಿಸುವ ಸಂಸ್ಥೆಗಳವರೆಗೆ, ಸಾರಿಗೆ, ಉದ್ದಿಮೆ, ಕಚೇರಿ ಹೀಗೆ ಎಲ್ಲರೂ ಬೇಕೋ ಬೇಡವೋ ಈ ಬಂದ್ನಲ್ಲಿ ಭಾಗವಹಿಸಿದರು. ನಿತ್ಯದ ರಂಜನೆ ದುಡಿಮೆಯನ್ನು ನಿಲ್ಲಿಸಿ ಚಿತ್ರೋದ್ಯಮವೂ ಇದರಲ್ಲಿ ಕೈಜೋಡಿಸಿತು. ಆದರೆ, ಇಂಥ ಮಹತ್ವದ ಬಂದ್ಗೆ ಕನ್ನಡದ ಬಹುಪಾಲು ಟಿ.ವಿ. ವಾಹಿನಿಗಳು ಯಾವುದೇ ಬೆಂಬಲವನ್ನು ತೋರಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.