ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಆಶ್ರಯದಲ್ಲಿ ವಿಧಾನಸೌಧದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕುವೆಂಪು ಚಿತ್ರ ಸಂಪುಟ ಲೋಕಾರ್ಪಣೆಗೊಂಡಿತು. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಪ್ರಕೃತಿಯಲ್ಲಿ ಲೀನ ಆಗುವವರೆಗೆ ರಸಋಷಿ ಕುವೆಂಪು ಅವರು ಇಟ್ಟ ಹೆಜ್ಜೆಗಳು, ನಡೆದು ಬಂದ ದಾರಿ, ಮಾಡಿದ ಸಾಧನೆಗಳು, ಏರಿದ ಎತ್ತರಗಳು, ಹೊಂದಿದ್ದ ಸಂಪರ್ಕಗಳು, ಪಡೆದ ಗೌರವ–ಸನ್ಮಾನ–ಪ್ರಶಸ್ತಿಗಳ ಮಣಿಹಾರ, ಕನ್ನಡ ಲೋಕ ಹರಿಸಿದ ಅಕ್ಕರೆಯ ಮಹಾಪೂರ–ಇವು ತುಂಬಿ ತುಳುಕುವ ಸ್ಮೃತಿ ರತ್ನಭಂಡಾರ ಈ ಚಿತ್ರಸಂಪುಟ. ಈ ಸಂಪುಟದಲ್ಲಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.