<p>ಬೆಂಗಳೂರು: ‘ತಿಂಡಿ, ಊಟ, ನೀರು ಏನು ಕೇಳಬೇಕಾದರೂ ಇಂಗ್ಲಿಷ್ನಲ್ಲಿ ಕೇಳಬೇಕು. ನಾನು ಬೆಂಗಳೂರಿನಲ್ಲಿ ಇದ್ದೆನೋ ಅಥವಾ ಬೇರೆಲ್ಲೋ ಇದ್ದೆನೋ ಅನಿಸುತ್ತಿದೆ. ಇದು ಎಂತಹ ಇಕಟ್ಟಿನ ಸ್ಥಿತಿ’ ಹೀಗೆ ಹೇಳಿದವರು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.<br /> <br /> ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಸಿರಿಗನ್ನಡ–ಹಿಂದೆ, ಇಂದು ಮತ್ತು ಮುಂದೆ’ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ‘ಈ ಪರಿಸರದಲ್ಲಿ ಕನ್ನಡದ ಬಗ್ಗೆ ಮಾತನಾಡುವುದೇ ಹಿಂಸೆ ಅನಿಸುತ್ತಿದೆ. ಇಲ್ಲಿ ಕನ್ನಡದ ವಾತಾವರಣವೇ ಇಲ್ಲ. ಕನ್ನಡ ಕೇಳಿಸಿಕೊಳ್ಳದವರಿಗೆ ಕನ್ನಡದ ಬಗ್ಗೆ ತಿಳಿಸುತ್ತಿದ್ದೇವೆ. ಇಡೀ ಉತ್ಸವದ ಬಗ್ಗೆಯೇ ನನಗೆ ಅನುಮಾನಗಳಿವೆ’ ಎಂದರು.<br /> <br /> ‘ಬರುವ ವರ್ಷವಾದರೂ ಆಯೋಜಕರು ಕನ್ನಡ ಸಂಸ್ಕೃತಿ, ಭಾಷೆಗೆ ಹೆಚ್ಚು ಒತ್ತು ಕೊಡಬೇಕು. ಈ ಉತ್ಸವದ ಮುಖೇನ ಜಗತ್ತಿನೊಂದಿಗೆ ಸಂವಾದ ಸಾಧ್ಯವಾಗುವ ವಾತಾವರಣ ಬೆಳೆಸಬೇಕು’ ಎಂದು ತಿಳಿಸಿದರು.<br /> <br /> ‘ಇಂಗ್ಲಿಷ್ ಭಾಷೆ ಇಲ್ಲದಿದ್ದರೆ ಸಂಪರ್ಕವೇ ಸಾಧ್ಯ ಇಲ್ಲ ಎಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ. ಇಂತಹ ಉತ್ಸವಗಳು ಅದಕ್ಕೆ ನೀರೆರೆದು ಪೋಷಿಸುತ್ತಿವೆ’ ಎಂದು ಹೇಳಿದರು.<br /> <br /> ‘ಇಂದು ನಾವು ಕೇವಲ ವಾದದಲ್ಲಿ ಮುಳುಗಿದ್ದೇವೆ. ಸಂವಾದವೇ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ. ಮನಸ್ಸು, ಹೃದಯ ರಣರಂಗವಾಗಿದೆ. 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸಂವಾದ, ಚರ್ಚೆ ನಡೆಸಬೇಕು. ಅದು ಆಗದಿದ್ದರೆ ಸಾಹಿತ್ಯ ಏಕೆ ಬೇಕು’ ಎಂದು ಪ್ರಶ್ನಿಸಿದರು.<br /> <br /> ‘ಯಾವುದೇ ಭಾಷೆಗೆ ಜ್ಞಾನ ಮತ್ತು ಪರಿಸರದ ನೆಲೆ ಇರುತ್ತದೆ. 12ನೇ ಶತಮಾನದ ವಚನಕಾರರು ಜ್ಞಾನ ಹಾಗೂ ಪರಿಸರದ ಭಾಷೆಯಾಗಿ ಕನ್ನಡವನ್ನು ಬೆಳೆಸಿದ್ದರು. ಆದರೆ ಇಂದು ಇಂಗ್ಲಿಷ್ ಜ್ಞಾನ, ಪರಿಸರದ ಭಾಷೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.<br /> <br /> ‘ಇಂಗ್ಲಿಷ್ನಲ್ಲಿ ಓದಿದರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೂ ಸಂಬಂಧ ಕಲ್ಪಿಸಿರುವುದರಿಂದ ಪ್ರಾದೇಶಿಕ ಭಾಷೆಗಳು ಆತಂಕದ ಸ್ಥಿತಿಗೆ ತಲುಪಿವೆ’ ಎಂದರು.<br /> <br /> ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ‘ಕನ್ನಡಕ್ಕೆ ಹಿಂದೆಯೂ ಅಪಾಯ ಇತ್ತು. ಈಗಲೂ ಇದೆ. ಆದರೆ ಎಲ್ಲವನ್ನೂ ಎದುರಿಸಿ ಇಂದಿಗೂ ಜೀವಂತವಾಗಿ ಉಳಿದಿದೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ’ ಎಂದರು.<br /> <br /> <strong>‘ಮಾಧ್ಯಮಗಳಿಗೆ ಜವಾಬ್ದಾರಿ ಏಕಿರಬಾರದು’</strong><br /> ‘ಮಾಧ್ಯಮಗಳು ಮಾತಿನ ಘನತೆ ಹಾಳು ಮಾಡುತ್ತಿವೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿವೆ. ಒಬ್ಬ ನಾಗರಿಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕಾದರೆ ಮಾಧ್ಯಮಗಳಿಗೆ ಏಕಿರಬಾರದು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶ್ನಿಸಿದರು.</p>.<p>‘ಮಾಧ್ಯಮಗಳಲ್ಲಿ ಸಾಮಾಜಿಕ ಎಚ್ಚರ ಬರಬೇಕು. ಸಂಸ್ಕೃತಿ, ಭಾಷೆ ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲ ಕ್ಷೇತ್ರದ ಸಂವೇದನಾಶೀಲ ಮನಸ್ಸುಗಳು ಒಂದಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ತಿಂಡಿ, ಊಟ, ನೀರು ಏನು ಕೇಳಬೇಕಾದರೂ ಇಂಗ್ಲಿಷ್ನಲ್ಲಿ ಕೇಳಬೇಕು. ನಾನು ಬೆಂಗಳೂರಿನಲ್ಲಿ ಇದ್ದೆನೋ ಅಥವಾ ಬೇರೆಲ್ಲೋ ಇದ್ದೆನೋ ಅನಿಸುತ್ತಿದೆ. ಇದು ಎಂತಹ ಇಕಟ್ಟಿನ ಸ್ಥಿತಿ’ ಹೀಗೆ ಹೇಳಿದವರು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.<br /> <br /> ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಸಿರಿಗನ್ನಡ–ಹಿಂದೆ, ಇಂದು ಮತ್ತು ಮುಂದೆ’ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> ‘ಈ ಪರಿಸರದಲ್ಲಿ ಕನ್ನಡದ ಬಗ್ಗೆ ಮಾತನಾಡುವುದೇ ಹಿಂಸೆ ಅನಿಸುತ್ತಿದೆ. ಇಲ್ಲಿ ಕನ್ನಡದ ವಾತಾವರಣವೇ ಇಲ್ಲ. ಕನ್ನಡ ಕೇಳಿಸಿಕೊಳ್ಳದವರಿಗೆ ಕನ್ನಡದ ಬಗ್ಗೆ ತಿಳಿಸುತ್ತಿದ್ದೇವೆ. ಇಡೀ ಉತ್ಸವದ ಬಗ್ಗೆಯೇ ನನಗೆ ಅನುಮಾನಗಳಿವೆ’ ಎಂದರು.<br /> <br /> ‘ಬರುವ ವರ್ಷವಾದರೂ ಆಯೋಜಕರು ಕನ್ನಡ ಸಂಸ್ಕೃತಿ, ಭಾಷೆಗೆ ಹೆಚ್ಚು ಒತ್ತು ಕೊಡಬೇಕು. ಈ ಉತ್ಸವದ ಮುಖೇನ ಜಗತ್ತಿನೊಂದಿಗೆ ಸಂವಾದ ಸಾಧ್ಯವಾಗುವ ವಾತಾವರಣ ಬೆಳೆಸಬೇಕು’ ಎಂದು ತಿಳಿಸಿದರು.<br /> <br /> ‘ಇಂಗ್ಲಿಷ್ ಭಾಷೆ ಇಲ್ಲದಿದ್ದರೆ ಸಂಪರ್ಕವೇ ಸಾಧ್ಯ ಇಲ್ಲ ಎಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ. ಇಂತಹ ಉತ್ಸವಗಳು ಅದಕ್ಕೆ ನೀರೆರೆದು ಪೋಷಿಸುತ್ತಿವೆ’ ಎಂದು ಹೇಳಿದರು.<br /> <br /> ‘ಇಂದು ನಾವು ಕೇವಲ ವಾದದಲ್ಲಿ ಮುಳುಗಿದ್ದೇವೆ. ಸಂವಾದವೇ ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ. ಮನಸ್ಸು, ಹೃದಯ ರಣರಂಗವಾಗಿದೆ. 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸಂವಾದ, ಚರ್ಚೆ ನಡೆಸಬೇಕು. ಅದು ಆಗದಿದ್ದರೆ ಸಾಹಿತ್ಯ ಏಕೆ ಬೇಕು’ ಎಂದು ಪ್ರಶ್ನಿಸಿದರು.<br /> <br /> ‘ಯಾವುದೇ ಭಾಷೆಗೆ ಜ್ಞಾನ ಮತ್ತು ಪರಿಸರದ ನೆಲೆ ಇರುತ್ತದೆ. 12ನೇ ಶತಮಾನದ ವಚನಕಾರರು ಜ್ಞಾನ ಹಾಗೂ ಪರಿಸರದ ಭಾಷೆಯಾಗಿ ಕನ್ನಡವನ್ನು ಬೆಳೆಸಿದ್ದರು. ಆದರೆ ಇಂದು ಇಂಗ್ಲಿಷ್ ಜ್ಞಾನ, ಪರಿಸರದ ಭಾಷೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.<br /> <br /> ‘ಇಂಗ್ಲಿಷ್ನಲ್ಲಿ ಓದಿದರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಶಿಕ್ಷಣ ಮತ್ತು ಉದ್ಯೋಗಕ್ಕೂ ಸಂಬಂಧ ಕಲ್ಪಿಸಿರುವುದರಿಂದ ಪ್ರಾದೇಶಿಕ ಭಾಷೆಗಳು ಆತಂಕದ ಸ್ಥಿತಿಗೆ ತಲುಪಿವೆ’ ಎಂದರು.<br /> <br /> ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ‘ಕನ್ನಡಕ್ಕೆ ಹಿಂದೆಯೂ ಅಪಾಯ ಇತ್ತು. ಈಗಲೂ ಇದೆ. ಆದರೆ ಎಲ್ಲವನ್ನೂ ಎದುರಿಸಿ ಇಂದಿಗೂ ಜೀವಂತವಾಗಿ ಉಳಿದಿದೆ. ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ’ ಎಂದರು.<br /> <br /> <strong>‘ಮಾಧ್ಯಮಗಳಿಗೆ ಜವಾಬ್ದಾರಿ ಏಕಿರಬಾರದು’</strong><br /> ‘ಮಾಧ್ಯಮಗಳು ಮಾತಿನ ಘನತೆ ಹಾಳು ಮಾಡುತ್ತಿವೆ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿವೆ. ಒಬ್ಬ ನಾಗರಿಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕಾದರೆ ಮಾಧ್ಯಮಗಳಿಗೆ ಏಕಿರಬಾರದು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶ್ನಿಸಿದರು.</p>.<p>‘ಮಾಧ್ಯಮಗಳಲ್ಲಿ ಸಾಮಾಜಿಕ ಎಚ್ಚರ ಬರಬೇಕು. ಸಂಸ್ಕೃತಿ, ಭಾಷೆ ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲ ಕ್ಷೇತ್ರದ ಸಂವೇದನಾಶೀಲ ಮನಸ್ಸುಗಳು ಒಂದಾಗಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>