‘ಬಸವ ಜನ್ಮಸ್ಥಳ’ದ ಹುಡುಕಾಟದಲ್ಲಿ
ಬಸವಣ್ಣ ಜನಿಸಿದ ಬಸವನಬಾಗೇವಾಡಿಯ ಮನೆಯಲ್ಲಿ ಹಳಗನ್ನಡ ಲಿಪಿಯುಳ್ಳ ‘ಬಸವೇಶ್ವರ ಜನ್ಮಸ್ಥಳ’ ಎಂಬ ಪ್ರಾಚೀನ ಶಿಲೆ ಹಾಗೂ ಈ ಕ್ಷೇತ್ರ ಚರಿತ್ರೆಯ ಒಂದು ಶಾಸನವಿತ್ತು. ಪುರ ಪ್ರಮುಖರಾಗಿದ್ದ ದಿ. ಚನ್ನಪ್ಪ ನಾಯಕೋಡಿ, ದಿ. ಈರಪ್ಪ ಕಲಾಳ, ದಿ. ಬಸವರಾಜ ಕುಂಟೋಜಿ ಹಾಗೂ ದಿ. ಬಾಳನಗೌಡ ಪಾಟೀಲ ಅವರೊಡಗೂಡಿ ನಾನೂ ಅವುಗಳನ್ನು ಗಮನಿಸಿದ್ದೇನೆ. ಕಾಲಾಂತರದಲ್ಲಿ ‘ಬಸವ ಜನ್ಮಸ್ಥಳ’ದಲ್ಲಿ ಬಸವ ಸ್ಮಾರಕ ನಿರ್ಮಿಸುವ ಯೋಜನೆ ಕಾರಣ ಕರ್ನಾಟಕ ಸರಕಾರವು ಅಲ್ಲಿ ವಾಸವಾಗಿದ್ದ ಕುಟುಂಬದವರಿಗೆ ಮನೆ ತೆರವುಗೊಳಿಸುವಂತೆ ಪತ್ರ ಮುಖೇನ ಆದೇಶ ಜಾರಿ ಮಾಡಿತ್ತು. ಆ ನಂತರವೇ ಆ ಪ್ರಾಚೀನ ಶಿಲೆ ಹಾಗೂ ಶಾಸನ ಕಾಣೆಯಾಗಿವೆ ಎಂಬುದು ಸ್ಥಳೀಯರ ಅಭಿಪ್ರಾಯ.Last Updated 17 ಆಗಸ್ಟ್ 2014, 19:30 IST