ಗ್ರಾಮದ ರಂಗಪ್ಪ ಎಂಬುವರ ಮಗ ರವಿ ಎಂಬುವರು ಹೈನುಗಾರಿಕೆ ನಡೆಸುತ್ತಿದ್ದು, 40 ಹಸುಗಳನ್ನು ಸಾಕಿದ್ದರು. ಎಂದಿನಂತೆ ಬೆಳಿಗ್ಗೆ ಹಸುಗಳನ್ನು ಮೇಯಲು ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಜಮೀನಿನಲ್ಲಿ ಚಿಗುರು ಜೋಳದ ಕುಡಿಗಳನ್ನು ತಿಂದ ಹಸುಗಳು ಸಮೀಪದ ಕೆರೆಯಲ್ಲಿ ನೀರು ಕುಡಿದಿವೆ. ಚಿಗುರು ತಿಂದಿದ್ದರಿಂದ ಉಸಿರಾಡಲು ಹಾಗೂ ಮೆಲುಕು ಹಾಕಲು ಸಾಧ್ಯವಾಗದ ಕಾರಣ 23 ಜಾನುವಾರುಗಳು ಮನೆಗೆ ಬರುವಾಗ ಒಂದೊಂದೇ ನೆಲಕ್ಕುರುಳಿ ಜೀವ ಬಿಟ್ಟಿವೆ. 3 ಹಸುಗಳ ಸ್ಥಿತಿ ಚಿಂತಾಜನಕವಾಗಿದೆ.