ದೇವಿಯ ಸನ್ನಿಧಿಯಲ್ಲಿ ತಾಳಿ ಕಟ್ಟುವ ಸಂಕಲ್ಪ: ‘ಕಟೀಲು ದೇವಿಯ ಆರಾಧಕನಾಗಿರುವುದರಿಂದ ಇದೇ ಸನ್ನಿಧಾನದಲ್ಲಿ ಬಾಳ ಸಂಗಾತಿಗೆ ತಾಳಿ ಕಟ್ಟಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ಎಲ್ಲರ ಸಮ್ಮತಿಯಂತೆ ಸರಳವಾಗಿ ಮದುವೆಯಾಗಿದ್ದೇವೆ. ರಜಾ ದಿನವಾಗಿರುವುದರಿಂದ ಭಕ್ತರು ಹೆಚ್ಚಿದ್ದು, ಅನೇಕ ಜೋಡಿಗಳಿದ್ದರಿಂದ ಜನ ಸೇರಿದ್ದರೂ ಎಲ್ಲವೂ ಸಮಯಕ್ಕೆ ಸರಿಯಾಗಿ ಸುಸೂತ್ರವಾಗಿ ಆಗಿದೆ. ದೇವಸ್ಥಾನದವರು ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ’ ಎಂದು ವರ, ಮಂಗಳೂರಿನ ಹರೀಶ್ ಹೇಳಿದರು.