2018ರ ಸೆ. 16ರಂದು ಕಲಬುರಗಿ ತಾಲ್ಲೂಕಿನ ಕೆರೆಬೋಸಗಾದ ಹೊಲದಲ್ಲಿನ ಪಾಳುಬಿದ್ದ ಮನೆಯಲ್ಲಿ ಅಡಗಿದ್ದ. ಈತನನ್ನು ಬಂಧಿಸಲು ಪೊಲೀಸರು ಹೋದಾಗ, ಅವರ ಮೇಲೆ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದ. ತಪ್ಪಿಸಿಕೊಂಡು ಓಡುವಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದರು. ಆದರೂ ಕೇಳದೆ ತಪ್ಪಿಸಿಕೊಳ್ಳುವಾಗ ಆತನ ಎಡಗಾಲಿಗೆ ಒಂದು ಗುಂಡು ಹೊಡೆದರು. ಕೆಲ ಸಮಯದಲ್ಲೇ ಮೇಲೆದ್ದ ನಾಗೇಶನು ಪೊಲೀಸರ ಮೇಲೆಯೇ ಮತ್ತೆ ಹಲ್ಲೆಗೆ ಮುಂದಾದ. ಆಗ ತನಿಖಾಧಿಕಾರಿ ಮತ್ತೊಂದು ಗುಂಡನ್ನು ಆತನ ಎಡಗಾಲಿಗೆ ಹಾರಿಸಿ, ನಂತರ ಬಂಧಿಸಿದರು.