ತಾಲ್ಲೂಕಿನ ಟಿ.ಕುರುಬರಹಳ್ಳಿ ಬಳಿ ಮೋಹನ ಶೆಟ್ಟಿ ತಮ್ಮ 2.5 ಎಕರೆ ಪ್ರದೇಶದಲ್ಲಿ 250 ಮಾವಿನ ಗಿಡಗಳನ್ನು ನಾಟಿ ಮಾಡಿದ್ದು ನೀರಿನ ಸಮಸ್ಯೆ ಇರುವ ಕಾರಣದಿಂದ ಟ್ಯಾಂಕರ್ ಮೂಲಕ ನೀರು ಮಾವಿನ ಗಿಡಗಳ ಬುಡಕ್ಕೆ ಹರಿಸುತ್ತಿದ್ದರು. ಆದರೆ, ಎಷ್ಟೇ ನೀರು ಹರಿಸಿದರೂ ಮಾವಿನ ಗಿಡಗಳ ಸುಳಿ (ರೆಂಬೆ ಹಾಗೂ ಚಿಗುರು) ಒಣಗುತ್ತಲೇ ಇದ್ದ ಕಾರಣದಿಂದ ತೋಟದಲ್ಲಿ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಿ ನೀರು ಹಾಯಿಸುತ್ತಿದ್ದಾರೆ.