ತಾಲ್ಲೂಕಿನ ಮೊಗರಹಳ್ಳಿ ಮರದ ರೆಂಬೆ ಮುರಿದು ರಸ್ತೆಗೆ ಬಿದ್ದಿದ್ದು, ಅದನ್ನು ತೆರವು ಮಾಡಿಸಲಾಯಿತು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ಅಪಾಯದಿಂದ ಪಾರಾಗಿದ್ದಾರೆ. ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ, ಮರಳಾಗಾಲ ಇತರೆ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ಅಲ್ಲಲ್ಲಿ ಬೀನ್ಸ್, ಹೀರೆಕಾಯಿ, ಟೊಮೆಟೊ ಮತ್ತು ಸೋರೆ ಬೆಳೆಗೆ ಹಾನಿಯಾಗಿದೆ.