ಪ್ರಕರಣದ ವಿವರ: ಹುಣಸೂರು ತಾಲ್ಲೂಕಿನ ಬಿ.ಆರ್.ಕಾವಲ್ ಗ್ರಾಮದ ಸರ್ವೆ ನಂ.40ರಲ್ಲಿನ 4 ಎಕರೆ ಕೃಷಿ ಭೂಮಿಯನ್ನು ಮಾಲೀಕ ಡೋಮಾನಿಕ್ ಎಂಬುವವರು 1994ರಲ್ಲಿ ಸರ್ಕಾರದಿಂದ ಸಾಗುವಳಿ ಪಡೆದು ವ್ಯವಸಾಯ ನಡೆಸಿದ್ದರು. ಈ ಮಧ್ಯೆ ಕೆಲವು ಕಾರಣದಿಂದಾಗಿ ಇವರು ಬಾಲನಾಗಮ್ಮ ಎಂಬುವವರಿಗೆ ಮಾರಾಟ ಮಾಡಿದ್ದು, ಕೃಷಿ ಭೂಮಿ ನೋಡಿಕೊಳ್ಳಲು ಬಾಲನಾಗಮ್ಮ ರಾಜು ಮತ್ತು ಕುಂಜಮ್ಮ ಎಂಬುವವರನ್ನು ಕಾವಲುಗಾರರನ್ನಾಗಿ ನೇಮಿಸಿದ್ದರು.