‘ಉದ್ಯೋಗ ಖಾತ್ರಿ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₹6 ರಿಂದ 7 ಲಕ್ಷ ವಿನಿಯೋಗಿಸಿ ಕೆರೆಯ ಹೂಳು ತೆಗೆಯಲು ಕ್ರಮ ಕೈಗೊಂಡಿತ್ತು. ಕೆರೆಯ ಸಂಪೂರ್ಣ ಹೂಳು ತೆಗೆದು, ಅಪಾರ ಪ್ರಮಾಣದ ನೀರಿನ ಸಂಗ್ರಹ ಏರ್ಪಟ್ಟು, ನೀರು ನಳನಳಿಸುವಂತೆ ಮಾಡಲು ಕೋಟ್ಯಂತರ ಮೊತ್ತ ಅಗತ್ಯವಿದೆ. ಕೆರೆ ಹೂಳೆತ್ತುವ ಸಮಯದಲ್ಲಿ ಕೆರೆಯಂಚಿಗೆ ಹಾದು ಹೋಗಿರುವ ರಸ್ತೆಯ ಬದಿಗೆ ಅಗತ್ಯವಿದ್ದ ಪಿಚ್ಚಿಂಗ್ ಕೆಲಸವನ್ನೂ ಮಾಡಲಾಗಿದೆ. 2008–09ರಲ್ಲಿ ಒಮ್ಮೆ ಒತ್ತುವರಿಯನ್ನು ಸಹ ತೆರವು ಗೊಳಿಸಲಾಗಿತ್ತು’ ಎನ್ನುತ್ತಾರೆ ಉಮ್ಮಚಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಪ್ಪಯ್ಯ ಪೂಜಾರಿ.