<p><strong>ಮಂಡ್ಯ:</strong> ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಭತ್ತ ಹಾಗೂ ಕಬ್ಬು ಬೆಳೆದಿರುವ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ 13 ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.<br /> <br /> 2000ನೇ ಇಸವಿಯಿಂದ 2016ರ ವರೆಗಿನ 16 ವರ್ಷಗಳಲ್ಲಿ ಸೆ. 4ರ ನೀರಿನಮಟ್ಟ ತೆಗೆದುಕೊಂಡಾಗ ಇಷ್ಟೊಂದು ಕಡಿಮೆ ಪ್ರಮಾಣಕ್ಕೆ (87.75 ಅಡಿ) ಯಾವ ವರ್ಷವೂ ಕುಸಿದಿರಲಿಲ್ಲ. ಅಣೆಕಟ್ಟೆಯಲ್ಲಿ 14.61 ಟಿಎಂಸಿ ಅಡಿ ನೀರಿದ್ದು, ಬಳಕೆಗೆ ಬರುವಂತಹದ್ದು ಕೇವಲ 6.26 ಟಿಎಂಸಿ ಅಡಿಗಳಷ್ಟು ಮಾತ್ರ.<br /> ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ 2003ನೇ ಇಸ್ವಿಯಲ್ಲಿ ಸಮಸ್ಯೆ ಎದುರಾದಾಗ 91.93 ಅಡಿ ಇತ್ತು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಸಮಸ್ಯೆ ಎದುರಾದಾಗಲೂ ನೀರಿನಮಟ್ಟವು 110.60 ಅಡಿ ಇತ್ತು.<br /> <br /> ಕಳೆದ ಎಂಟು ದಿನಗಳಿಂದ ಅಣೆಕಟ್ಟೆಯಿಂದ 13ರಿಂದ 16 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಗೆ ಹರಿದು ಬರುವ ನೀರಿನ ಪ್ರಮಾಣ 8.500 ಕ್ಯುಸೆಕ್ನಷ್ಟಿದೆ. ಈ ಅವಧಿಯಲ್ಲಿ ಆರಂಭದಲ್ಲಿ 99.60 ಅಡಿಯಷ್ಟಿದ್ದ ನೀರಿನ ಪ್ರಮಾಣವು ಬುಧವಾರ 87.75 ಅಡಿಗೆ ಕುಸಿದಿದೆ. ಸೆ. 20ರ ವರೆಗೆ ನೀರು ಹರಿಸುವುದರಿಂದ ಅಣೆಕಟ್ಟೆಯಲ್ಲಿ ನೀರಾವರಿಗೆ ಮೂರರಿಂದ ನಾಲ್ಕು ಟಿಎಂಸಿ ಅಡಿಯಷ್ಟು ಮಾತ್ರ ನೀರು ಉಳಿಯಬಹುದು ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.<br /> <br /> ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದ ಎಂಟು ದಿನಗಳಲ್ಲಿ ಅಣೆಕಟ್ಟೆಯ ನೀರಿನಮಟ್ಟ 12 ಅಡಿಯಷ್ಟು ಕುಸಿದಿದೆ. ಸೆ. 20ರ ವೇಳೆಗೆ ನೀರಿನ ಕನಿಷ್ಠ ಮಟ್ಟ 74 ಅಡಿಯ ಆಸು–ಪಾಸಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.<br /> <br /> <strong>ತ್ರಿಶಂಕು ಸ್ಥಿತಿಯಲ್ಲಿ ರೈತರು: </strong>ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ಸಲಹಾ ಸಮಿತಿ ತಿಳಿಸಿದ ಮೇಲೆ ಕೃಷಿ ಇಲಾಖೆಯಿಂದ ಭತ್ತದ ಬೀಜ ತೆಗೆದುಕೊಂಡು ನಾಟಿ ಮಾವಡಿದ ರೈತರು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.<br /> <br /> ಜಿಲ್ಲೆಯಲ್ಲಿ ನಾಲೆಯ ನೀರು ಆಶ್ರಯಿಸಿ 1 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 35 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕೆಲವರ ಭತ್ತಕ್ಕೆ ಈಗಾಗಲೇ ಒಂದು ತಿಂಗಳಾಗಿದ್ದರೆ, ಇನ್ನು ಕೆಲವರು ಈಗಷ್ಟೇ ನಾಟಿ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯದವರೆಗೂ ನೀರು ಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಭತ್ತ ಹಾಗೂ ಕಬ್ಬು ಬೆಳೆದಿರುವ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ 13 ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.<br /> <br /> 2000ನೇ ಇಸವಿಯಿಂದ 2016ರ ವರೆಗಿನ 16 ವರ್ಷಗಳಲ್ಲಿ ಸೆ. 4ರ ನೀರಿನಮಟ್ಟ ತೆಗೆದುಕೊಂಡಾಗ ಇಷ್ಟೊಂದು ಕಡಿಮೆ ಪ್ರಮಾಣಕ್ಕೆ (87.75 ಅಡಿ) ಯಾವ ವರ್ಷವೂ ಕುಸಿದಿರಲಿಲ್ಲ. ಅಣೆಕಟ್ಟೆಯಲ್ಲಿ 14.61 ಟಿಎಂಸಿ ಅಡಿ ನೀರಿದ್ದು, ಬಳಕೆಗೆ ಬರುವಂತಹದ್ದು ಕೇವಲ 6.26 ಟಿಎಂಸಿ ಅಡಿಗಳಷ್ಟು ಮಾತ್ರ.<br /> ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ 2003ನೇ ಇಸ್ವಿಯಲ್ಲಿ ಸಮಸ್ಯೆ ಎದುರಾದಾಗ 91.93 ಅಡಿ ಇತ್ತು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಸಮಸ್ಯೆ ಎದುರಾದಾಗಲೂ ನೀರಿನಮಟ್ಟವು 110.60 ಅಡಿ ಇತ್ತು.<br /> <br /> ಕಳೆದ ಎಂಟು ದಿನಗಳಿಂದ ಅಣೆಕಟ್ಟೆಯಿಂದ 13ರಿಂದ 16 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಗೆ ಹರಿದು ಬರುವ ನೀರಿನ ಪ್ರಮಾಣ 8.500 ಕ್ಯುಸೆಕ್ನಷ್ಟಿದೆ. ಈ ಅವಧಿಯಲ್ಲಿ ಆರಂಭದಲ್ಲಿ 99.60 ಅಡಿಯಷ್ಟಿದ್ದ ನೀರಿನ ಪ್ರಮಾಣವು ಬುಧವಾರ 87.75 ಅಡಿಗೆ ಕುಸಿದಿದೆ. ಸೆ. 20ರ ವರೆಗೆ ನೀರು ಹರಿಸುವುದರಿಂದ ಅಣೆಕಟ್ಟೆಯಲ್ಲಿ ನೀರಾವರಿಗೆ ಮೂರರಿಂದ ನಾಲ್ಕು ಟಿಎಂಸಿ ಅಡಿಯಷ್ಟು ಮಾತ್ರ ನೀರು ಉಳಿಯಬಹುದು ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.<br /> <br /> ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದ ಎಂಟು ದಿನಗಳಲ್ಲಿ ಅಣೆಕಟ್ಟೆಯ ನೀರಿನಮಟ್ಟ 12 ಅಡಿಯಷ್ಟು ಕುಸಿದಿದೆ. ಸೆ. 20ರ ವೇಳೆಗೆ ನೀರಿನ ಕನಿಷ್ಠ ಮಟ್ಟ 74 ಅಡಿಯ ಆಸು–ಪಾಸಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.<br /> <br /> <strong>ತ್ರಿಶಂಕು ಸ್ಥಿತಿಯಲ್ಲಿ ರೈತರು: </strong>ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ಸಲಹಾ ಸಮಿತಿ ತಿಳಿಸಿದ ಮೇಲೆ ಕೃಷಿ ಇಲಾಖೆಯಿಂದ ಭತ್ತದ ಬೀಜ ತೆಗೆದುಕೊಂಡು ನಾಟಿ ಮಾವಡಿದ ರೈತರು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.<br /> <br /> ಜಿಲ್ಲೆಯಲ್ಲಿ ನಾಲೆಯ ನೀರು ಆಶ್ರಯಿಸಿ 1 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಹಾಗೂ 35 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕೆಲವರ ಭತ್ತಕ್ಕೆ ಈಗಾಗಲೇ ಒಂದು ತಿಂಗಳಾಗಿದ್ದರೆ, ಇನ್ನು ಕೆಲವರು ಈಗಷ್ಟೇ ನಾಟಿ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯದವರೆಗೂ ನೀರು ಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>