<p><strong>ನವದೆಹಲಿ</strong> : ಗರಿಷ್ಠ ಮುಖಬೆಲೆಯ ನೋಟು ರದ್ದತಿ ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಶಕ್ತಿ ಪ್ರದರ್ಶನ ನಡೆಸಿದರು. ನಾಲ್ಕು ಪಕ್ಷಗಳು ಅವರ ಬೆಂಬಲಕ್ಕೆ ನಿಂತಿದ್ದವು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿಲ್ಲ. ಹಾಗಾಗಿ, ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಮಮತಾ ಹೇಳಿದರು.</p>.<p>ಎಸ್ಪಿ, ಜೆಡಿ(ಯು), ಎನ್ಸಿಪಿ ಮತ್ತು ಎಎಪಿ ಪಕ್ಷಗಳ ಮುಖಂಡರ ಜೊತೆ ಜಂತರ್ ಮಂತರ್ನಲ್ಲಿ ಮಾತನಾಡಿದ ಮಮತಾ, ‘ಬ್ಯಾಂಕ್ನಿಂದ ನಗದು ಪಡೆಯಲು ಮಿತಿ ಹೇರುವ ಮೂಲಕ ಬಿಜೆಪಿ ಸರ್ಕಾರವು ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> ‘ಮೋದಿಯವರೇ, ದೇಶ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿಲ್ಲ. ನೀವು ನಿಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದೀರಿ’ ಎಂದು ಮಮತಾ ವಾಗ್ದಾಳಿ ನಡೆಸಿದರು.<br /> ನೋಟು ರದ್ದತಿ ತೀರ್ಮಾನವು ಜನರಿಗೆ ಸಮಸ್ಯೆ ತಂದೊಡ್ಡಿದೆ. ಈ ತೀರ್ಮಾನವು ಎಲ್ಲ ವರ್ಗಗಳ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿದೆ, ದೇಶದ ಆರ್ಥಿಕ ಬೆಳವಣಿಗೆಗೆ ತಡೆಯಾಗಿದೆ ಎಂದು ಆರೋಪಿಸಿದರು.</p>.<p>ಬಿಜೆಪಿ ನೇತೃತ್ವದ ಸರ್ಕಾರವು ಸಾಮಾನ್ಯ ಪ್ರಜೆಗಳ ಲೂಟಿಯಲ್ಲಿ ತೊಡಗಿದೆ. ಆದರೆ ಸ್ವಿಸ್ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರನ್ನು ಮುಟ್ಟಲೂ ಹೋಗುತ್ತಿಲ್ಲ. ಇದು ಆಶ್ಚರ್ಯದ ಸಂಗತಿ ಎಂದರು.</p>.<p>‘ನಾನು ಪ್ರಧಾನಿ ಸ್ಥಾನದಲ್ಲಿ ಇದ್ದಿದ್ದರೆ ಜನರ ಕ್ಷಮೆ ಯಾಚಿಸುತ್ತಿದ್ದೆ. ಮೋದಿ ಅವರೇ, ನಿಮಗೆ ಇಷ್ಟೊಂದು ಪ್ರತಿಷ್ಠೆ ಏಕೆ? ದೇಶದ ಪ್ರತಿಯೊಬ್ಬನಿಗೂ ಕಾಳ ಧನಿಕ ಎಂಬ ಹಣೆಪಟ್ಟಿ ಅಂಟಿಸಿ ನೀವು ನಿಮ್ಮನ್ನು ಸಂತನಂತೆ ಬಿಂಬಿಸಿಕೊಳ್ಳುತ್ತಿದ್ದೀರಿ’ ಎಂದು ಮೋದಿ ಅವರನ್ನು ಟೀಕಿಸಿದರು.<br /> ‘ವಿವರಣೆ ನೀಡಿ’: ನೋಟು ರದ್ದತಿ ತೀರ್ಮಾನದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ ಜೆಡಿ(ಯು) ನಾಯಕ ಶರದ್ ಯಾದವ್, ಈ ತೀರ್ಮಾನದಿಂದ ದೇಶಕ್ಕೆ ಆಗುವ ಲಾಭ ಏನು ಎಂಬುದನ್ನು ವಿವರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಿದರು.</p>.<p>‘ಯಾವ ಕಾಯ್ದೆಯ ಅಡಿ ಈ ತೀರ್ಮಾನ ಕೈಗೊಳ್ಳಲಾಯಿತು? ಜನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್ನಿಂದ ಪಡೆಯಲು ನೀವು ನಿರ್ಬಂಧ ವಿಧಿಸಿರುವುದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ. ನೋಟು ರದ್ದತಿಯಿಂದ ಸಣ್ಣ ಉದ್ಯಮಿಗಳ ವಹಿವಾಟು ನಾಶವಾಗಿದೆ. ಈ ಕ್ರಮದಿಂದ ಕಪ್ಪುಹಣ ಹೇಗೆ ನಾಶವಾಗುತ್ತದೆ ಎಂಬುದನ್ನು ಸಂಸತ್ತಿಗೆ ಬಂದು ವಿವರಿಸಿ’ ಎಂದು ಶರದ್ ಯಾದವ್ ಆಗ್ರಹಿಸಿದರು.<br /> ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದರೂ, ಅವರದೇ ಪಕ್ಷದ ನಾಯಕ ಶರದ್ ಯಾದವ್ ಈ ಪ್ರತಿಭಟನೆಯುಲ್ಲಿ ಭಾಗಿಯಾಗಿದ್ದರು.</p>.<p>ಪ್ರತಿಭಟನಾ ಸ್ಥಳದಲ್ಲಿ ಮೋದಿ ಅವರ ಪರವಾಗಿ ಘೋಷಣೆ ಕೂಗುತ್ತಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ, ‘ನಮ್ಮ ಕಾರ್ಯಕ್ರಮ ಹಾಳು ಮಾಡಲು ಇವರನ್ನು ಕಳುಹಿಸಲಾಗಿದೆ’ ಎಂದರು.<br /> ಕಪ್ಪು ಹಣದ ವಿರುದ್ಧ ಸಮರ ಮುಂದುವರಿಯಲಿದೆ ಎಂದು ಮೋದಿ ಅವರು ಹೇಳಿರುವುದನ್ನು ಉಲ್ಲೇಖಿಸಿದ ಮಮತಾ, ‘ಜನರ ಚಿನ್ನ, ಜಮೀನಿನ ಮೇಲೆ ಕೂಡ ಸರ್ಕಾರ ಕಣ್ಣು ಹಾಕಬಹುದು’ ಎಂಬ ಆತಂಕ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong> : ಗರಿಷ್ಠ ಮುಖಬೆಲೆಯ ನೋಟು ರದ್ದತಿ ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಶಕ್ತಿ ಪ್ರದರ್ಶನ ನಡೆಸಿದರು. ನಾಲ್ಕು ಪಕ್ಷಗಳು ಅವರ ಬೆಂಬಲಕ್ಕೆ ನಿಂತಿದ್ದವು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿಲ್ಲ. ಹಾಗಾಗಿ, ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು’ ಎಂದು ಮಮತಾ ಹೇಳಿದರು.</p>.<p>ಎಸ್ಪಿ, ಜೆಡಿ(ಯು), ಎನ್ಸಿಪಿ ಮತ್ತು ಎಎಪಿ ಪಕ್ಷಗಳ ಮುಖಂಡರ ಜೊತೆ ಜಂತರ್ ಮಂತರ್ನಲ್ಲಿ ಮಾತನಾಡಿದ ಮಮತಾ, ‘ಬ್ಯಾಂಕ್ನಿಂದ ನಗದು ಪಡೆಯಲು ಮಿತಿ ಹೇರುವ ಮೂಲಕ ಬಿಜೆಪಿ ಸರ್ಕಾರವು ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> ‘ಮೋದಿಯವರೇ, ದೇಶ ನಿಮ್ಮ ಕೈಯಲ್ಲಿ ಸುರಕ್ಷಿತವಾಗಿಲ್ಲ. ನೀವು ನಿಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದೀರಿ’ ಎಂದು ಮಮತಾ ವಾಗ್ದಾಳಿ ನಡೆಸಿದರು.<br /> ನೋಟು ರದ್ದತಿ ತೀರ್ಮಾನವು ಜನರಿಗೆ ಸಮಸ್ಯೆ ತಂದೊಡ್ಡಿದೆ. ಈ ತೀರ್ಮಾನವು ಎಲ್ಲ ವರ್ಗಗಳ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡಿದೆ, ದೇಶದ ಆರ್ಥಿಕ ಬೆಳವಣಿಗೆಗೆ ತಡೆಯಾಗಿದೆ ಎಂದು ಆರೋಪಿಸಿದರು.</p>.<p>ಬಿಜೆಪಿ ನೇತೃತ್ವದ ಸರ್ಕಾರವು ಸಾಮಾನ್ಯ ಪ್ರಜೆಗಳ ಲೂಟಿಯಲ್ಲಿ ತೊಡಗಿದೆ. ಆದರೆ ಸ್ವಿಸ್ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರನ್ನು ಮುಟ್ಟಲೂ ಹೋಗುತ್ತಿಲ್ಲ. ಇದು ಆಶ್ಚರ್ಯದ ಸಂಗತಿ ಎಂದರು.</p>.<p>‘ನಾನು ಪ್ರಧಾನಿ ಸ್ಥಾನದಲ್ಲಿ ಇದ್ದಿದ್ದರೆ ಜನರ ಕ್ಷಮೆ ಯಾಚಿಸುತ್ತಿದ್ದೆ. ಮೋದಿ ಅವರೇ, ನಿಮಗೆ ಇಷ್ಟೊಂದು ಪ್ರತಿಷ್ಠೆ ಏಕೆ? ದೇಶದ ಪ್ರತಿಯೊಬ್ಬನಿಗೂ ಕಾಳ ಧನಿಕ ಎಂಬ ಹಣೆಪಟ್ಟಿ ಅಂಟಿಸಿ ನೀವು ನಿಮ್ಮನ್ನು ಸಂತನಂತೆ ಬಿಂಬಿಸಿಕೊಳ್ಳುತ್ತಿದ್ದೀರಿ’ ಎಂದು ಮೋದಿ ಅವರನ್ನು ಟೀಕಿಸಿದರು.<br /> ‘ವಿವರಣೆ ನೀಡಿ’: ನೋಟು ರದ್ದತಿ ತೀರ್ಮಾನದ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ ಜೆಡಿ(ಯು) ನಾಯಕ ಶರದ್ ಯಾದವ್, ಈ ತೀರ್ಮಾನದಿಂದ ದೇಶಕ್ಕೆ ಆಗುವ ಲಾಭ ಏನು ಎಂಬುದನ್ನು ವಿವರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಿದರು.</p>.<p>‘ಯಾವ ಕಾಯ್ದೆಯ ಅಡಿ ಈ ತೀರ್ಮಾನ ಕೈಗೊಳ್ಳಲಾಯಿತು? ಜನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್ನಿಂದ ಪಡೆಯಲು ನೀವು ನಿರ್ಬಂಧ ವಿಧಿಸಿರುವುದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ. ನೋಟು ರದ್ದತಿಯಿಂದ ಸಣ್ಣ ಉದ್ಯಮಿಗಳ ವಹಿವಾಟು ನಾಶವಾಗಿದೆ. ಈ ಕ್ರಮದಿಂದ ಕಪ್ಪುಹಣ ಹೇಗೆ ನಾಶವಾಗುತ್ತದೆ ಎಂಬುದನ್ನು ಸಂಸತ್ತಿಗೆ ಬಂದು ವಿವರಿಸಿ’ ಎಂದು ಶರದ್ ಯಾದವ್ ಆಗ್ರಹಿಸಿದರು.<br /> ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರದ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದರೂ, ಅವರದೇ ಪಕ್ಷದ ನಾಯಕ ಶರದ್ ಯಾದವ್ ಈ ಪ್ರತಿಭಟನೆಯುಲ್ಲಿ ಭಾಗಿಯಾಗಿದ್ದರು.</p>.<p>ಪ್ರತಿಭಟನಾ ಸ್ಥಳದಲ್ಲಿ ಮೋದಿ ಅವರ ಪರವಾಗಿ ಘೋಷಣೆ ಕೂಗುತ್ತಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ, ‘ನಮ್ಮ ಕಾರ್ಯಕ್ರಮ ಹಾಳು ಮಾಡಲು ಇವರನ್ನು ಕಳುಹಿಸಲಾಗಿದೆ’ ಎಂದರು.<br /> ಕಪ್ಪು ಹಣದ ವಿರುದ್ಧ ಸಮರ ಮುಂದುವರಿಯಲಿದೆ ಎಂದು ಮೋದಿ ಅವರು ಹೇಳಿರುವುದನ್ನು ಉಲ್ಲೇಖಿಸಿದ ಮಮತಾ, ‘ಜನರ ಚಿನ್ನ, ಜಮೀನಿನ ಮೇಲೆ ಕೂಡ ಸರ್ಕಾರ ಕಣ್ಣು ಹಾಕಬಹುದು’ ಎಂಬ ಆತಂಕ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>