<p><strong>ನವದೆಹಲಿ:</strong> ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯು ‘ವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಟೀಕಿಸಿದ್ದಾರೆ.<br /> <br /> ‘ಈ ಆದೇಶವು ನೋಟುಗಳನ್ನು, ಬ್ಯಾಂಕ್ ಖಾತೆಗಳನ್ನು ಹಾಗೂ ನಂಬಿಕೆಯ ನೆಲೆಯಲ್ಲಿ ನಿಂತಿರುವ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಸೇನ್ ಅವರು ಎನ್ಡಿಟಿವಿ ವಾಹಿನಿಗೆ ಹೇಳಿದ್ದಾರೆ.<br /> <br /> ‘ವಿಶ್ವಾಸ ಆಧರಿಸಿ ಬೆಳೆದಿರುವ ಅರ್ಥ ವ್ಯವಸ್ಥೆಯ ಪಾಲಿಗೆ ಈ ತೀರ್ಮಾನ ಅನರ್ಥ ತರಲಿದೆ. ಕಳೆದ 20 ವರ್ಷಗಳಿಂದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿತ್ತು. ಇದು ಒಬ್ಬರು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ ಮೂಲಕ ನಡೆದಿತ್ತು. ನಾವೊಂದು ಭರವಸೆ ನೀಡಿದ್ದೆವು, ಆದರೆ ಆ ಭರವಸೆಯಂತೆ ನಡೆದುಕೊಳ್ಳುವುದಿಲ್ಲ ಎನ್ನುವ ಮೂಲಕ ವ್ಯವಸ್ಥೆಯ ಬುಡಕ್ಕೇ ಏಟು ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ನಾನು ಬಂಡವಾಳಶಾಹಿ ವ್ಯವಸ್ಥೆಯನ್ನು ಅಷ್ಟೇನೂ ಮೆಚ್ಚುವ ವ್ಯಕ್ತಿ ಅಲ್ಲ. ಈ ವ್ಯವಸ್ಥೆ ಹಲವು ಯಶಸ್ಸುಗಳನ್ನು ಕಂಡಿದೆ ಎಂಬುದು ನಿಜ. ಆದರೆ, ನೋಟಿಗೆ ಇಂತಿಷ್ಟು ಬೆಲೆ ಇದೆ ಎಂಬ ಭರವಸೆ ನೀಡಿ, ನಂತರ ಭರವಸೆ ಹಿಂಪಡೆಯುವುದು ನಿರಂಕುಶ ತೀರ್ಮಾನ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯು ‘ವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಟೀಕಿಸಿದ್ದಾರೆ.<br /> <br /> ‘ಈ ಆದೇಶವು ನೋಟುಗಳನ್ನು, ಬ್ಯಾಂಕ್ ಖಾತೆಗಳನ್ನು ಹಾಗೂ ನಂಬಿಕೆಯ ನೆಲೆಯಲ್ಲಿ ನಿಂತಿರುವ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಸೇನ್ ಅವರು ಎನ್ಡಿಟಿವಿ ವಾಹಿನಿಗೆ ಹೇಳಿದ್ದಾರೆ.<br /> <br /> ‘ವಿಶ್ವಾಸ ಆಧರಿಸಿ ಬೆಳೆದಿರುವ ಅರ್ಥ ವ್ಯವಸ್ಥೆಯ ಪಾಲಿಗೆ ಈ ತೀರ್ಮಾನ ಅನರ್ಥ ತರಲಿದೆ. ಕಳೆದ 20 ವರ್ಷಗಳಿಂದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿತ್ತು. ಇದು ಒಬ್ಬರು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ ಮೂಲಕ ನಡೆದಿತ್ತು. ನಾವೊಂದು ಭರವಸೆ ನೀಡಿದ್ದೆವು, ಆದರೆ ಆ ಭರವಸೆಯಂತೆ ನಡೆದುಕೊಳ್ಳುವುದಿಲ್ಲ ಎನ್ನುವ ಮೂಲಕ ವ್ಯವಸ್ಥೆಯ ಬುಡಕ್ಕೇ ಏಟು ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ನಾನು ಬಂಡವಾಳಶಾಹಿ ವ್ಯವಸ್ಥೆಯನ್ನು ಅಷ್ಟೇನೂ ಮೆಚ್ಚುವ ವ್ಯಕ್ತಿ ಅಲ್ಲ. ಈ ವ್ಯವಸ್ಥೆ ಹಲವು ಯಶಸ್ಸುಗಳನ್ನು ಕಂಡಿದೆ ಎಂಬುದು ನಿಜ. ಆದರೆ, ನೋಟಿಗೆ ಇಂತಿಷ್ಟು ಬೆಲೆ ಇದೆ ಎಂಬ ಭರವಸೆ ನೀಡಿ, ನಂತರ ಭರವಸೆ ಹಿಂಪಡೆಯುವುದು ನಿರಂಕುಶ ತೀರ್ಮಾನ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>