ತಂಜಾವೂರು: ಇಲ್ಲಿನ ವಾಜಕೈ ಗ್ರಾಮದ ನಿವಾಸಿ 70ರ ಹರೆಯದ ರೈತರೊಬ್ಬರು ಬ್ಯಾಂಕ್ನಿಂದ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಪಾಪನಾಶನಂ ಇಂಡಿಯನ್ ಬ್ಯಾಂಕ್ನಲ್ಲಿ ಈ ರೈತ ಸುಬ್ರಮಣ್ಯನ್ ಎಂಬವರು ಖಾತೆ ಹೊಂದಿದ್ದರು.
ಶನಿವಾರ ಬ್ಯಾಂಕ್ನ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತಿದ್ದ ಸುಬ್ರಮಣ್ಯನ್ ಅಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ವೈದ್ಯರನ್ನು ಕರೆ ತಂದಿದ್ದರೂ, ವೈದ್ಯರು ಬರುವ ಮುನ್ನ ಸುಬ್ರಮಣ್ಯನ್ ಅವರ ಉಸಿರು ನಿಂತಿತ್ತು.
ಸುಬ್ರಮಣ್ಯನ್ ಅವರು ಪತ್ನಿಯೊಂದಿಗೆ ಬ್ಯಾಂಕ್ಗೆ ಬಂದಿದ್ದರು.
ಅವರ ಖಾತೆಯಲ್ಲಿ 17,000 ರೂಪಾಯಿ ಇತ್ತು. ತಮ್ಮ ಹಳ್ಳಿಯಿಂದ ದೂರವಿರುವ ಬ್ಯಾಂಕ್ಗೆ ಬರುವಾಗ ಬೆಳಗ್ಗಿನ ತಿಂಡಿ ಕೂಡಾ ಅವರು ಸೇವಿಸಿರಲಿಲ್ಲ.
ತುಂಬಾ ಹೊತ್ತು ಸಾಲಿನಲ್ಲಿ ನಿಂತು ದಣಿವಾಗಿದ್ದ ಅವರು, ದುಡ್ಡು ಪಡೆಯಲು ನಿಂತ ಸರತಿ ಸಾಲು ಕೌಂಟರ್ ಹತ್ತಿರ ತಲುಪುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ ಎಂದು ಬ್ಯಾಂಕ್ ನೌಕರರೊಬ್ಬರು ಹೇಳಿದ್ದಾರೆ.