<p><strong>ನವದೆಹಲಿ :</strong> ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿ ಮುಂಬೈ ಕುಟುಂಬವೊಂದು ₹ 2 ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆಮಾಡಿದೆ. ಆದಾಯ ತೆರಿಗೆ (ಐ.ಟಿ) ಇಲಾಖೆ ಅದನ್ನು ತಿರಸ್ಕರಿಸಿದ್ದು, ಕುಟುಂಬದ ವಿರುದ್ಧ ತನಿಖೆ ಆರಂಭಿಸಿದೆ.</p>.<p>ಮುಂಬೈನ ಬಾಂದ್ರಾದ ಅಬ್ದುಲ್ ರಜಾಕ್ ಮೊಹಮ್ಮದ್ ಸಯೀದ್ ಅವರು, ತಮ್ಮ ಮತ್ತು ತಮ್ಮ ಕುಟುಂಬದ ಇತರ ಮೂವರು ಸದಸ್ಯರ ಬಳಿ ಒಟ್ಟು ₹ 2 ಲಕ್ಷ ಕೋಟಿ ಮೌಲ್ಯದ ಅಕ್ರಮ ಸಂಪತ್ತು ಇದೆ ಎಂದು ಘೋಷಿಸಿದ್ದಾರೆ.</p>.<p>ಐಡಿಎಸ್ ಯೋಜನೆ ಅಡಿ ಘೋಷಣೆಯಾಗಿರುವ ಅಕ್ರಮ ಸಂಪತ್ತಿನ ಒಟ್ಟು ಮೌಲ್ಯ ₹67,382 ಕೋಟಿ. ಇದಕ್ಕಿಂತ ಈ ಕುಟುಂಬ ಘೋಷಿಸಿರುವ ಸಂಪತ್ತಿನ ಮೌಲ್ಯ ಮೂರುಪಟ್ಟು ಹೆಚ್ಚು. </p>.<p>ಈ ಪ್ರಮಾಣದ ಸಂಪತ್ತು ಘೋಷಿಸಿಕೊಂಡಿರುವ ಕುಟುಂಬ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದೆ. ಅವರ ಬಳಿ ಅಷ್ಟು ಸಂಪತ್ತು ಇರುವ ಬಗ್ಗೆ ಅನುಮಾನಗಳು ಇವೆ. ಹೀಗಾಗಿ ಅವರ ಘೋಷಣೆಯನ್ನು ತಿರಸ್ಕರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.</p>.<p>ಅಬ್ದುಲ್ ರಜಾಕ್ ಮೂಲತಃ ಅಜ್ಮೀರ್ನವರು. ಅವರ ಕುಟುಂಬದಲ್ಲಿ ಮೂವರ ಪಾನ್ ಕಾರ್ಡ್ಗಳು ಅಜ್ಮೀರ್ವಿಳಾಸದಲ್ಲಿವೆ. ಐಡಿಎಸ್ ಘೋಷಣೆಗೂ ಸ್ವಲ್ಪ ದಿನ ಮೊದಲಷ್ಟೇ ಕುಟುಂಬ ಮುಂಬೈಗೆ ಬಂದಿದೆ. ಈ ಕುಟುಂಬ ಬೇರೆಯವರ ಹಣವನ್ನು ತಮ್ಮದೆಂದು ಘೋಷಿಸಿಕೊಂಡಿರಬಹುದು ಎಂದು ಸಚಿವಾಲಯ ಶಂಕಿಸಿದೆ.</p>.<p>ಗುಜರಾತ್ ಮೂಲದ ಉದ್ಯಮಿ ಮಹೇಶ್ ಷಾ ಸಹ ತಮ್ಮ ಬಳಿ ₹13,860 ಕೋಟಿ ಅಕ್ರಮ ಸಂಪತ್ತು ಇರುವುದಾಗಿ ಘೋಷಿಸಿಕೊಂಡಿದ್ದರು. ಘೋಷಿತ ಸಂಪತ್ತಿಗೆ ತೆರಿಗೆ ಪಾವತಿಸದ ಕಾರಣ ಅವರ ಘೋಷಣೆಯನ್ನು ಐ.ಟಿ ಅಧಿಕಾರಿಗಳು ತಿರಸ್ಕರಿಸಿದ್ದರು. ‘ಕಮಿಷನ್ ಆಸೆಗಾಗಿ ಇತರರ ಹಣ ನನ್ನದೆಂದು ಘೋಷಿಸಿಕೊಂಡಿದ್ದೆ’ ಎಂದು ಷಾ ಶನಿವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.<p>ಎರಡೂ ಪ್ರಕರಣಗಳಲ್ಲಿ ಇತರರು ಇವರನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ ಇಬ್ಬರೂ ಸುಳ್ಳು ಘೋಷಣೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಐಡಿಎಸ್ ಅಡಿ ಘೋಷಣೆಯಾದ ಅಕ್ರಮ ಸಂಪತ್ತಿನಲ್ಲಿ ಈ ಇಬ್ಬರ ಸಂಪತ್ತನ್ನು ಪರಿಗಣಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಕ್ಟೋಬರ್ 1ರಂದು ನೀಡಿದ್ದ ಮಾಹಿತಿಯಲ್ಲಿ ₹65,250 ಕೋಟಿ ಅಕ್ರಮ ಸಂಪತ್ತು ಘೋಷಣೆಯಾಗಿದೆ ಎಂದು ಸಚಿವಾಲಯ ತಿಳಿಸಿತ್ತು. ಈಗ ಪರಿಷ್ಕೃತ ಮಾಹಿತಿಯಲ್ಲಿ ಈ ಮೊತ್ತ ಹೆಚ್ಚಾಗಿದೆ.</p>.<p><strong>₹ 20,₹ 50ರ ಹೊಸ ನೋಟು</strong><br /> <strong>ಬೆಂಗಳೂರು: </strong>ಹೊಸ ವಿನ್ಯಾಸದ ₹20,₹ 50 ಮುಖಬೆಲೆಯ ನೂತನ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಹೊಸ ನೋಟುಗಳು ಯಾವಾಗ ಬಿಡುಗಡೆ ಆಗುತ್ತದೆ ಎಂದು ಆರ್ಬಿಐ ತಿಳಿಸಿಲ್ಲ. ಆದರೆ, ಹೊಸ ನೋಟುಗಳು ಬಿಡುಗಡೆಯಾದ ನಂತರವೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ ಎಂದು ಸ್ಪಷ್ಟಪಡಿಸಿದೆ. </p>.<p>ಹಳೆಯ ನೋಟುಗಳಿಗೆ ಹೋಲಿಸಿದರೆ ಹೊಸ ನೋಟುಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ನೋಟಿನಲ್ಲಿ ಮುದ್ರಣ ವರ್ಷ ‘2016’ ಎಂದಿರುತ್ತದೆ. ಜತೆಗೆ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಇರುತ್ತದೆ. ಕ್ರಮ ಸಂಖ್ಯೆಯನ್ನು ಹೊಸ ₹2,000 ಮುಖಬೆಲೆಯಲ್ಲಿರುವ ರೀತಿಯಲ್ಲಿ ಮುದ್ರಿಸಲಾಗುತ್ತದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ :</strong> ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿ ಮುಂಬೈ ಕುಟುಂಬವೊಂದು ₹ 2 ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆಮಾಡಿದೆ. ಆದಾಯ ತೆರಿಗೆ (ಐ.ಟಿ) ಇಲಾಖೆ ಅದನ್ನು ತಿರಸ್ಕರಿಸಿದ್ದು, ಕುಟುಂಬದ ವಿರುದ್ಧ ತನಿಖೆ ಆರಂಭಿಸಿದೆ.</p>.<p>ಮುಂಬೈನ ಬಾಂದ್ರಾದ ಅಬ್ದುಲ್ ರಜಾಕ್ ಮೊಹಮ್ಮದ್ ಸಯೀದ್ ಅವರು, ತಮ್ಮ ಮತ್ತು ತಮ್ಮ ಕುಟುಂಬದ ಇತರ ಮೂವರು ಸದಸ್ಯರ ಬಳಿ ಒಟ್ಟು ₹ 2 ಲಕ್ಷ ಕೋಟಿ ಮೌಲ್ಯದ ಅಕ್ರಮ ಸಂಪತ್ತು ಇದೆ ಎಂದು ಘೋಷಿಸಿದ್ದಾರೆ.</p>.<p>ಐಡಿಎಸ್ ಯೋಜನೆ ಅಡಿ ಘೋಷಣೆಯಾಗಿರುವ ಅಕ್ರಮ ಸಂಪತ್ತಿನ ಒಟ್ಟು ಮೌಲ್ಯ ₹67,382 ಕೋಟಿ. ಇದಕ್ಕಿಂತ ಈ ಕುಟುಂಬ ಘೋಷಿಸಿರುವ ಸಂಪತ್ತಿನ ಮೌಲ್ಯ ಮೂರುಪಟ್ಟು ಹೆಚ್ಚು. </p>.<p>ಈ ಪ್ರಮಾಣದ ಸಂಪತ್ತು ಘೋಷಿಸಿಕೊಂಡಿರುವ ಕುಟುಂಬ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದೆ. ಅವರ ಬಳಿ ಅಷ್ಟು ಸಂಪತ್ತು ಇರುವ ಬಗ್ಗೆ ಅನುಮಾನಗಳು ಇವೆ. ಹೀಗಾಗಿ ಅವರ ಘೋಷಣೆಯನ್ನು ತಿರಸ್ಕರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.</p>.<p>ಅಬ್ದುಲ್ ರಜಾಕ್ ಮೂಲತಃ ಅಜ್ಮೀರ್ನವರು. ಅವರ ಕುಟುಂಬದಲ್ಲಿ ಮೂವರ ಪಾನ್ ಕಾರ್ಡ್ಗಳು ಅಜ್ಮೀರ್ವಿಳಾಸದಲ್ಲಿವೆ. ಐಡಿಎಸ್ ಘೋಷಣೆಗೂ ಸ್ವಲ್ಪ ದಿನ ಮೊದಲಷ್ಟೇ ಕುಟುಂಬ ಮುಂಬೈಗೆ ಬಂದಿದೆ. ಈ ಕುಟುಂಬ ಬೇರೆಯವರ ಹಣವನ್ನು ತಮ್ಮದೆಂದು ಘೋಷಿಸಿಕೊಂಡಿರಬಹುದು ಎಂದು ಸಚಿವಾಲಯ ಶಂಕಿಸಿದೆ.</p>.<p>ಗುಜರಾತ್ ಮೂಲದ ಉದ್ಯಮಿ ಮಹೇಶ್ ಷಾ ಸಹ ತಮ್ಮ ಬಳಿ ₹13,860 ಕೋಟಿ ಅಕ್ರಮ ಸಂಪತ್ತು ಇರುವುದಾಗಿ ಘೋಷಿಸಿಕೊಂಡಿದ್ದರು. ಘೋಷಿತ ಸಂಪತ್ತಿಗೆ ತೆರಿಗೆ ಪಾವತಿಸದ ಕಾರಣ ಅವರ ಘೋಷಣೆಯನ್ನು ಐ.ಟಿ ಅಧಿಕಾರಿಗಳು ತಿರಸ್ಕರಿಸಿದ್ದರು. ‘ಕಮಿಷನ್ ಆಸೆಗಾಗಿ ಇತರರ ಹಣ ನನ್ನದೆಂದು ಘೋಷಿಸಿಕೊಂಡಿದ್ದೆ’ ಎಂದು ಷಾ ಶನಿವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p>.<p>ಎರಡೂ ಪ್ರಕರಣಗಳಲ್ಲಿ ಇತರರು ಇವರನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ ಇಬ್ಬರೂ ಸುಳ್ಳು ಘೋಷಣೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಐಡಿಎಸ್ ಅಡಿ ಘೋಷಣೆಯಾದ ಅಕ್ರಮ ಸಂಪತ್ತಿನಲ್ಲಿ ಈ ಇಬ್ಬರ ಸಂಪತ್ತನ್ನು ಪರಿಗಣಿಸಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಅಕ್ಟೋಬರ್ 1ರಂದು ನೀಡಿದ್ದ ಮಾಹಿತಿಯಲ್ಲಿ ₹65,250 ಕೋಟಿ ಅಕ್ರಮ ಸಂಪತ್ತು ಘೋಷಣೆಯಾಗಿದೆ ಎಂದು ಸಚಿವಾಲಯ ತಿಳಿಸಿತ್ತು. ಈಗ ಪರಿಷ್ಕೃತ ಮಾಹಿತಿಯಲ್ಲಿ ಈ ಮೊತ್ತ ಹೆಚ್ಚಾಗಿದೆ.</p>.<p><strong>₹ 20,₹ 50ರ ಹೊಸ ನೋಟು</strong><br /> <strong>ಬೆಂಗಳೂರು: </strong>ಹೊಸ ವಿನ್ಯಾಸದ ₹20,₹ 50 ಮುಖಬೆಲೆಯ ನೂತನ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಹೊಸ ನೋಟುಗಳು ಯಾವಾಗ ಬಿಡುಗಡೆ ಆಗುತ್ತದೆ ಎಂದು ಆರ್ಬಿಐ ತಿಳಿಸಿಲ್ಲ. ಆದರೆ, ಹೊಸ ನೋಟುಗಳು ಬಿಡುಗಡೆಯಾದ ನಂತರವೂ ಹಳೆಯ ನೋಟುಗಳು ಚಲಾವಣೆಯಲ್ಲಿ ಇರಲಿವೆ ಎಂದು ಸ್ಪಷ್ಟಪಡಿಸಿದೆ. </p>.<p>ಹಳೆಯ ನೋಟುಗಳಿಗೆ ಹೋಲಿಸಿದರೆ ಹೊಸ ನೋಟುಗಳ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ನೋಟಿನಲ್ಲಿ ಮುದ್ರಣ ವರ್ಷ ‘2016’ ಎಂದಿರುತ್ತದೆ. ಜತೆಗೆ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಇರುತ್ತದೆ. ಕ್ರಮ ಸಂಖ್ಯೆಯನ್ನು ಹೊಸ ₹2,000 ಮುಖಬೆಲೆಯಲ್ಲಿರುವ ರೀತಿಯಲ್ಲಿ ಮುದ್ರಿಸಲಾಗುತ್ತದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>