ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’

Last Updated 5 ಡಿಸೆಂಬರ್ 2016, 20:14 IST
ಅಕ್ಷರ ಗಾತ್ರ

* 1948, ಫೆಬ್ರುವರಿ 24: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನನ.

* ತಂದೆ ಹೆಸರು ಜಯರಾಮ್, ತಾಯಿ ಹೆಸರು ವೇದವಲ್ಲಿ (ನಟಿ ಸಂಧ್ಯಾ). ಜನಿಸಿದಾಗ ಜಯಾ ಅವರಿಗೆ ಇಟ್ಟ ಹೆಸರು ‘ಕೋಮಲವಲ್ಲಿ’.

* ಕೋಮಲವಲ್ಲಿಗೆ ಒಂದು ವರ್ಷ ವಯಸ್ಸಾಗಿದ್ದಾಗ, ಜಯಲಲಿತಾ ಎಂದು ನಾಮಕರಣ ಮಾಡಲಾಯಿತು.

* ಜಯಾ ಅವರ ತಂದೆಯ ತಂದೆ ನರಸಿಂಹನ್ ರಂಗಾಚಾರಿ ಅವರು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಆಸ್ಥಾನದಲ್ಲಿ ವೈದ್ಯರಾಗಿದ್ದರು.

* ಜಯಾ ಅವರ ತಾಯಿಯ ತಂದೆ ರಂಗಸ್ವಾಮಿ ಅಯ್ಯಂಗಾರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದರು.

* ಜಯಾ ಎರಡು ವರ್ಷದವರಾಗಿದ್ದಾಗ ತಂದೆ ಜಯರಾಮ್ ತೀರಿಕೊಂಡರು. ನಂತರ ತಾಯಿ ವೇದವಲ್ಲಿ, ಬೆಂಗಳೂರಿನ ತಂದೆಯ ಮನೆಗೆ ಮರಳಿದರು.

* 1952ರಲ್ಲಿ ಮದ್ರಾಸಿಗೆ ತೆರಳಿದ ವೇದವಲ್ಲಿ, ಅಲ್ಲಿ ‘ಸಂಧ್ಯಾ’ ಎಂಬ ಹೆಸರಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

* 1950ರಿಂದ 1958ರವೆಗೆ ಜಯಲಲಿತಾ ಅವರು ಮೈಸೂರಿನಲ್ಲಿ ತಮ್ಮ ಅಜ್ಜ–ಅಜ್ಜಿ ಜತೆ ಇದ್ದರು.

* ಜಯಾ ಅವರು ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯೂ ಹೌದು.

* ಮದ್ರಾಸಿಗೆ ವಾಸ್ತವ್ಯ ಬದಲಾಯಿಸಿದ ನಂತರ ಜಯಾ ಅವರು, ಅಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದರು.

* 1960 ಮೇ ತಿಂಗಳಲ್ಲಿ ಮೈಲಾಪುರದಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗ ಪ್ರವೇಶ.

* 1961ರಲ್ಲಿ ಕನ್ನಡದ ’ಶ್ರೀಶೈಲ ಮಹಾತ್ಮೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯ.

* 1964ರಲ್ಲಿ ಬಿ.ಆರ್. ಪಂತುಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಯ.

* 1964ರಲ್ಲಿ ವೈ.ಜಿ. ಪಾರ್ಥಸಾರಥಿ ನಾಟಕ ತಂಡದ ಮೂಲಕ, ರಂಗಭೂಮಿಗೆ ಪ್ರವೇಶ.

* 1965ರಲ್ಲಿ ವೆನ್ನಿರ ಅಡೈ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶ. ತಮಿಳು ಸಿನಿಮಾದಲ್ಲಿ ಸ್ಕರ್ಟ್ ಧರಿಸಿ ಅಭಿನಯಿಸಿದ ಮೊದಲ ನಟಿ ಜಯಾ!

* ಜಯಾ ಅವರು ತೆಲುಗು, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

* 1982ರಲ್ಲಿ ಎಐಎಡಿಎಂಕೆ ಪಕ್ಷ ಸೇರ್ಪಡೆ.

* 1983ರಲ್ಲಿ ಪಕ್ಷದ ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ನೇಮಕ.

* 1984ರಲ್ಲಿ ರಾಜ್ಯಸಭೆ ಪ್ರವೇಶ.

* 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು, ತಮಿಳುನಾಡು ವಿಧಾನಸಭೆ ಪ್ರವೇಶ. ವಿರೋಧ ಪಕ್ಷದ ನಾಯಕಿಯಾಗಿ ಕರ್ತವ್ಯ ನಿರ್ವಹಣೆ.

* 1989ರ ಮಾರ್ಚ್‌ 25ರಂದು ವಿಧಾನಸಭೆಯಲ್ಲಿ ನಡೆದ ಗಲಾಟೆಯಲ್ಲಿ, ಜಯಾ ಮೇಲೆ ಹಲ್ಲೆ.

* 1991ರಲ್ಲಿ ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

* 1996ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಾ ನೇತೃತ್ವದ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಸೋಲು.

* ಕಲರ್ ಟಿ.ವಿ. ಹಗರಣದಲ್ಲಿ ಲಂಚ ಪಡೆದ ಆರೋಪದ ಅಡಿ 1996ರ ಡಿಸೆಂಬರ್‌ನಲ್ಲಿ ಜಯಲಲಿತಾ ಬಂಧನ.

* 2000ನೇ ಇಸವಿಯಲ್ಲಿ ಈ ಆರೋಪದಿಂದ ಮುಕ್ತರಾದ ಜಯಾ.

* ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಾ ತಪ್ಪಿತಸ್ಥೆ ಎಂದು ನ್ಯಾಯಾಲಯ ಘೋಷಿಸಿದ್ದ ಕಾರಣ, 2001ರ ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧ. ಆದರೂ ಚುನಾವಣೆ ನಂತರ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

* ಆದರೆ, ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಘೋಷಣೆ ಆಗಿರುವಾಗ ಮುಖ್ಯಮಂತ್ರಿ ಆಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ ಕಾರಣ, ಅಧಿಕಾರದಿಂದ ಕೆಳಗಿಳಿದ ಜಯಾ.

* ಕೆಲವು ಆರೋಪಗಳಿಂದ ಜಯಾ ಅವರನ್ನು ಮದ್ರಾಸ್ ಹೈಕೋರ್ಟ್ ದೋಷಮುಕ್ತಗಿಳಿಸಿದ ಕಾರಣ, 2003ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
* 2011ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಾ ಅವರಿಂದ ಮೂರನೆಯ ಬಾರಿ ಅಧಿಕಾರ ಸ್ವೀಕಾರ.

* 2014, ಸೆಪ್ಟೆಂಬರ್ 27: ಅಕ್ರಮ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಜಯಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಜಯಾ.

* 2015 ಮೇ 11: ಈ ಪ್ರಕರಣದಲ್ಲಿ ಜಯಾ ತಪ್ಪು ಮಾಡಿಲ್ಲ ಎಂದು ಆದೇಶಿಸಿದ ಕರ್ನಾಟಕ ಹೈಕೋರ್ಟ್‌. ಮತ್ತೆ ಮುಖ್ಯಮಂತ್ರಿಯಾದ ಜಯಾ.

* 2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿದ ಜಯಾ ಪಕ್ಷ. ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT