‘ಒಮ್ಮೆ ಅನ್ಯಗ್ರಹಜೀವಿಗಳು ಭೂಮಿಗೆ ಬಂದು, ಇಲ್ಲಿನ ಮೂವರನ್ನು ಅಧ್ಯಯನಕ್ಕೆಂದು ತಮ್ಮ ಗ್ರಹಕ್ಕೆ ಕರೆದುಕೊಂಡು ಹೋದರಂತೆ. ಆಗ ಮೂವರು ಬಡಪಾಯಿಗಳು ನಮ್ಮನ್ನೇ ಯಾಕೆ ಕರೆದುಕೊಂಡು ಬಂದಿರಿ’ ಎಂದು ಪ್ರಶ್ನಿಸಿದರಂತೆ. ಆಗ ಅನ್ಯಗ್ರಹ ಜೀವಿಗಳು ಕೂಡಾ ‘ನಾವೇ ಯಾಕೆ ನಿಮ್ಮನ್ನು ಕರೆದುಕೊಂಡು ಬಂದೆವು’ ಎಂದು ಮರು ಪ್ರಶ್ನಿಸಿದರಂತೆ. ಈ ಪ್ರಶಸ್ತಿ ಸಂದರ್ಭದಲ್ಲಿ ನನ್ನ ಪ್ರಶ್ನೆಯೂ ಇದೇ ಆಗಿದೆ. ನಾನು ಯಾಕೆ ಎಂದು? ಮೊದಲಿಗೆ ನನಗೆ ಅಚ್ಚರಿಯಾಯಿತು. ಇರಲಿ, ಆಟ–ಗಲಾಟಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಮಾತು ಮಗಿಸಿದರು.