<p><strong>ದೆಹಲಿ</strong>: ಆಗ್ನೇಯ ದೆಹಲಿಯ ಜೈತ್ಪುರ್ ಪ್ರದೇಶದಲ್ಲಿ ಎಟಿಎಂ ಮುಂದೆ ಇದ್ದ ಸಾಲು ನೋಡಿ ಪ್ರಧಾನಿ ಮೋದಿಯವರನ್ನು ಬೈದ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ವರದಿಯಾಗಿದೆ.</p>.<p>45ರ ಹರೆಯದ ಲಲ್ಲನ್ ಸಿಂಗ್ ಕುಶ್ವಾಹ ಎಂಬ ವ್ಯಕ್ತಿ ಇಸ್ಮಾಯಿಲ್ಪುರ್ ನಲ್ಲಿರುವ ಅಂಗಡಿಯೊಂದಕ್ಕೆ ಟೀವಿ ಖರೀದಿಸಲೆಂದು ಹೋದಾಗ ಆ ಅಂಗಡಿಯ ಪಕ್ಕದಲ್ಲಿದ್ದ ಎಟಿಎಂ ಮುಂದೆ ಜನ ಸಾಲು ಹಟ್ಟಿ ನಿಂತಿದ್ದರು.</p>.<p>ಇದನ್ನು ನೋಡಿದ ಕುಶ್ವಾಹಾ, ಮೋದಿಯವರು ನೋಟು ರದ್ದು ಮಾಡಿದ್ದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿ ಮೋದಿಯವರಿಗೆ ಬೈದಿದ್ದಾರೆ.</p>.<p>ಆ ಹೊತ್ತಿಗೆ ಎಟಿಎಂ ಪಕ್ಕ ಇದ್ದ ಇನ್ನೊಂದು ಅಂಗಡಿಯ ಮಾಲೀಕ ಆಸ್ತಿಕ್ ಎಂಬಾತ ಕುಶ್ವಾಹ ಅವರನ್ನು ಪ್ರಶ್ನಿಸಿ ಜಗಳ ಮಾಡಿದ್ದಾನೆ. ನಂತರ ಕ್ರಿಕೆಟ್ ಸ್ಟಂಪ್ನಿಂದ ತಲೆಗೆ ಹೊಡೆದಿದ್ದಾನೆ ಎಂದು ಕುಶ್ವಾಹಾ ದೂರಿದ್ದಾರೆ.</p>.<p>ಆತನ ಹೊಡೆತದಿಂದ ತಲೆಗೆ ಗಂಭೀರ ಗಾಯವಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ ಎಂದು ಕುಶ್ವಾಹ ಹೇಳಿದ್ದಾರೆ.</p>.<p>ಈ ಘಟನೆ ಬಗ್ಗೆ ಜೈತ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ</strong>: ಆಗ್ನೇಯ ದೆಹಲಿಯ ಜೈತ್ಪುರ್ ಪ್ರದೇಶದಲ್ಲಿ ಎಟಿಎಂ ಮುಂದೆ ಇದ್ದ ಸಾಲು ನೋಡಿ ಪ್ರಧಾನಿ ಮೋದಿಯವರನ್ನು ಬೈದ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ವರದಿಯಾಗಿದೆ.</p>.<p>45ರ ಹರೆಯದ ಲಲ್ಲನ್ ಸಿಂಗ್ ಕುಶ್ವಾಹ ಎಂಬ ವ್ಯಕ್ತಿ ಇಸ್ಮಾಯಿಲ್ಪುರ್ ನಲ್ಲಿರುವ ಅಂಗಡಿಯೊಂದಕ್ಕೆ ಟೀವಿ ಖರೀದಿಸಲೆಂದು ಹೋದಾಗ ಆ ಅಂಗಡಿಯ ಪಕ್ಕದಲ್ಲಿದ್ದ ಎಟಿಎಂ ಮುಂದೆ ಜನ ಸಾಲು ಹಟ್ಟಿ ನಿಂತಿದ್ದರು.</p>.<p>ಇದನ್ನು ನೋಡಿದ ಕುಶ್ವಾಹಾ, ಮೋದಿಯವರು ನೋಟು ರದ್ದು ಮಾಡಿದ್ದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿ ಮೋದಿಯವರಿಗೆ ಬೈದಿದ್ದಾರೆ.</p>.<p>ಆ ಹೊತ್ತಿಗೆ ಎಟಿಎಂ ಪಕ್ಕ ಇದ್ದ ಇನ್ನೊಂದು ಅಂಗಡಿಯ ಮಾಲೀಕ ಆಸ್ತಿಕ್ ಎಂಬಾತ ಕುಶ್ವಾಹ ಅವರನ್ನು ಪ್ರಶ್ನಿಸಿ ಜಗಳ ಮಾಡಿದ್ದಾನೆ. ನಂತರ ಕ್ರಿಕೆಟ್ ಸ್ಟಂಪ್ನಿಂದ ತಲೆಗೆ ಹೊಡೆದಿದ್ದಾನೆ ಎಂದು ಕುಶ್ವಾಹಾ ದೂರಿದ್ದಾರೆ.</p>.<p>ಆತನ ಹೊಡೆತದಿಂದ ತಲೆಗೆ ಗಂಭೀರ ಗಾಯವಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ ಎಂದು ಕುಶ್ವಾಹ ಹೇಳಿದ್ದಾರೆ.</p>.<p>ಈ ಘಟನೆ ಬಗ್ಗೆ ಜೈತ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>