ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ, ನೌಕರಿಗಾಗಿ ನಡೆಸುವ ಸಂದರ್ಶನವನ್ನು ಸ್ಥಳೀಯ ಭಾಷೆಯಲ್ಲಿ ನಡೆಸಬೇಕು ಎಂಬು ದನ್ನು ಸೇರಿಸಲಾಗಿದೆ. ಆದರೆ, ಇಂದಿನ ಸಂದ ರ್ಭದಲ್ಲಿ, ರಾಜ್ಯ ಸರ್ಕಾರದ ಪಾಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿ ಗರಿಗಿಂತ ಹೊರ ರಾಜ್ಯಗಳ ಕನ್ನಡೇತರ ಅಭ್ಯರ್ಥಿಗಳೇ ಹೆಚ್ಚಿರುವುದನ್ನು ಗಮನಿಸಬೇಕು.
ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿಗರು ಇಲ್ಲದಿದ್ದರೆ ಹಳ್ಳಿಗರಿಗೆ ಬ್ಯಾಂಕ್ ವಹಿವಾಟು ನಡೆಸುವಾಗ ತೊಂದರೆ ಆಗುತ್ತದೆ. ಗ್ರಾಮೀಣ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವುದರಿಂದ ಕನ್ನಡಿಗರ ಉದ್ಯೋಗದ ಸಮಸ್ಯೆ ಹಾಗೂ ಗ್ರಾಮೀಣ ವಾಸಿಗಳ ವಹಿವಾಟಿನ ಸಮಸ್ಯೆಯನ್ನು ತುಸು ನಿವಾರಿಸುವ ಜೊತೆಗೆ ಗ್ರಾಮೀಣ ಬ್ಯಾಂಕುಗಳ ಆದಾಯವನ್ನೂ ಹೆಚ್ಚಿಸಬಹುದು.
-ಪ್ರವೀಣ್ ಕುಮಾರ್ ಜಿ., ಸಾಗರ