ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ಪ್ರಶಸ್ತಿ’ ಪ್ರಕಟಿಸಲಾಗಿದೆ. 68ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ರಾಜ್ಯದ ಒಟ್ಟು 7 ಸಾಧಕರು ಸೇರಿದಂತೆ ದೇಶದ 89 ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 7 ಜನರಿಗೆ ಪದ್ಮ ವಿಭೂಷಣ, 7 ಮಂದಿಗೆ ಪದ್ಮ ಭೂಷಣ ಹಾಗೂ 75 ಜನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದದಲ್ಲಿ ಅಸಾದಾರಣ ಕೊಡುಗೆ ನೀಡಿದ ರಾಜ್ಯದ ಪ್ರೊ.ಉಡುಪಿ ರಾಮಚಂದ್ರರಾವ್ ಅವರಿಗೆ ‘ಪದ್ಮವಿಭೂಷಣ’ ಸಂದಿದೆ.
ಆಯ್ಕೆಯಾಗಿರುವ ಕನ್ನಡಿಗರು:
ಪದ್ಮ ವಿಭೂಷಣ ಪ್ರಶಸ್ತಿ
* ಪ್ರೊ.ಉಡುಪಿ ರಾಮಚಂದ್ರ ರಾವ್(ಯು.ಆರ್.ರಾವ್)– ವಿಜ್ಞಾನ ಮತ್ತು ತಂತ್ರಜ್ಞಾನ
ಪದ್ಮ ಶ್ರೀ ಪ್ರಶಸ್ತಿ
* ಪ್ರೊ. ಜಿ.ವೆಂಕಟಸುಬ್ಬಯ್ಯ– ಸಾಹಿತ್ಯ
* ಭಾರತಿ ವಿಷ್ಣುವರ್ಧನ್– ಕಲೆ ಮತ್ತು ಸಿನಿಮಾ
* ಸುಕ್ರಿ ಬೊಮ್ಮಗೌಡ –ಕಲೆ ಮತ್ತು ಸಂಗೀತ
* ಶೇಖರ್ ನಾಯ್ಕ್ – ಕ್ರೀಡೆ
* ವಿಕಾಸ್ ಗೌಡ – ಕ್ರೀಡೆ
* ಗಿರೀಶ್ ಭಾರದ್ವಾಜ್– ಸಮಾಜ ಸೇವೆ