ಉಡುಪಿ: ಭಕ್ತಿ ವಾಹಿನಿ ಹರಿಯುವಲ್ಲಿ ಪರಮಾತ್ಮನ ಸ್ಮರಣೆ ಸದಾ ನೆಲೆಸುತ್ತದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಹರಿದಾಸ ಸಮ್ಮೇಳನ ಟ್ರಸ್ಟ್ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಸಹಯೋಗದಲ್ಲಿ ನಗರದ ರಾಜಾಂಗ ಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ಅಖಿಲ ಭಾರತ ಹರಿದಾಸ ಸಮ್ಮೇಳ ನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
‘ನಾರಾಯಣ’ ಎಂಬ ನಾಲ್ಕು ಅಕ್ಷ ರದ ದೇವರನಾಮವನ್ನು ಹೇಳಲು ಕಷ್ಟ ವಿಲ್ಲ. ಅತ್ಯಂತ ಸುಲಭವಾಗಿದೆ. ಅಲ್ಲದೆ, ಅವರವರ ನಾಲಿಗೆ ಅವರ ಸ್ವಾಧೀನ ದಲ್ಲಿದೆ. ಆದರೂ ಜನರು ಅಸಡ್ಡೆ ತೋರುತ್ತಿದ್ದಾರೆ. ಆ ಮೂಲಕ ನರಕದ ಹಾದಿಯಲ್ಲಿ ಸಾಗಿದ್ದಾರೆ. ಇದಕ್ಕಿಂತ ಆಶ್ಚ ರ್ಯದ ವಿಷಯ ಬೇರೊಂದಿಲ್ಲ ಎಂದು ವಿಷಾದಿಸಿದರು.