ಸ್ಟಾರ್ ಸುವರ್ಣ ವಾಹಿನಿಯ ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಘಟ್ಟ ಎದುರಾಗುತ್ತಿದೆ. ಪಾರ್ವತಿ ಪರಮೇಶ್ವರರನ್ನು ರಂಜಿಸಲು ಗಣೇಶನ ಆಗಮನವಾಗುತ್ತಿದೆ.
ಇಂದು (ಫೆ.13) ಗಣೇಶನ ಜನನವಾಗುತ್ತಿದ್ದು, ಸರ್ವವಿಘ್ನಗಳನ್ನು ನಿವಾರಿಸಲು ವಿನಾಯಕ ಬರುತ್ತಿದ್ದಾನೆ. ಶಿವ ತಪಸ್ಸಿಗೆ ಹೋದ ಸಂದರ್ಭದಲ್ಲಿ ಪಾರ್ವತಿ ಗಣೇಶನಿಗೆ ಜನ್ಮನೀಡುತ್ತಾಳೆ ಮಹಾದೇವ ಮತ್ತೆ ಬರುವವರೆಗೂ ಕೈಲಾಸವೆಲ್ಲ ಗಣೇಶನ ತುಂಟಾಟಕ್ಕೆ ಸಾಕ್ಷಿಯಾಗಿ, ಗಣೇಶ ಎಲ್ಲರ ಮುದ್ದಿನ ಕೂಸಾಗುತ್ತಾನೆ.
ಗಣೇಶನ ಆಗಮನದ ಸನ್ನಿವೇಶವನ್ನೊಳಗೊಂಡ ಕಂತು ಸೋಮವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.