ಸದಸ್ಯ ಚಂದ್ರಶೇಖರ ಬಡಿಗೇರ ಮಾತ ನಾಡಿ, ಪುರಸಭೆಯ ಮಳಿಗೆಗಳನ್ನು ಅಧಿಕೃತವಾಗಿ ಬಾಡಿಗೆ ಪಡೆದವರು ಮಾತ್ರ ಮಳಿಗೆಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಎಲ್ಲ ಸದಸ್ಯರ ಒಪ್ಪಿಗೆಯ ಮೇರಿಗೆ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಹೇಮಾ ವತಿ ಅಬ್ಬಿಗೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಗಮನಕ್ಕೆ ತಾರದೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ– ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋ ಪಿಸಿ ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಸದಸ್ಯ ಸೋಮನಗೌಡ್ರ ಗೌಡ್ರ ಸಾಮಾನ್ಯ ಸಭೆಯಲ್ಲಿ ಧರಣಿ ನಡೆಸಿ ದರು. ಪುರಸಭೆ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಕುರಿತು ಮಾತ್ರ ಚರ್ಚಿಸಬೇಕು. ಎಸ್ಡಿಎಂಸಿ ಆಯ್ಕೆ ವಿಚಾರ ಸಭೆಯಲ್ಲಿ ತರುವುದು ಸರಿಯಲ್ಲ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಮನವಿ ಮಾಡಿ ದರು. ನಂತರ ಸೋಮನಗೌಡ ಗೌಡ್ರ ಧರಣಿ ಕೈಬಿಟ್ಟರು.
ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್, ಸದಸ್ಯರಾದ ಬಸವರಾಜ ರಾಮೇನಹಳ್ಳಿ, ಪ್ರಭು ಅಬ್ಬಿಗೇರಿ, ಪ್ರೇಮವ್ವ ಗಣದಿನ್ನಿ, ರಿಹಾನಾಬೇಗಂ ಕೆಲೂರ, ದಾನೇಶ್ವರಿ ಭಜಂತ್ರಿ, ಬಸವ ರಾಜ ಗಣಾಚಾರಿ, ಕೊಟ್ರಮ್ಮ ಇಟಗಿ, ರೇಖಾ ದೇಸಾಯಿ, ಪಕ್ರುಸಾಬ್ ಹಾರೋ ಗೇರಿ, ಲಿಂಗರಾಜಗೌಡ ಪಾಟೀಲ, ಶಾರದಾ ದೇಸಾಯಿ ಹಾಜರಿದ್ದರು.