</p><div> ಕಳೆದ ವರ್ಷ ತೆರಿಗೆಯ ಭಾರ ಹೇರಿದ್ದ ಮುಖ್ಯಮಂತ್ರಿ ಈ ವರ್ಷ ಅಬಕಾರಿ ಸುಂಕವನ್ನು ವಿವಿಧ ಸ್ಲಾಬ್ಗಳ ಮೇಲೆ ಶೇ 6 ರಿಂದ ಶೇ 16ರವರೆಗೂ ಹೆಚ್ಚಿಸಿದ್ದಾರೆ. ಬಾರ್, ಪಬ್ಗಳಲ್ಲಿ ಮದ್ಯದ ಮೇಲೆ ವಿಧಿಸಲಾಗುತ್ತಿದ್ದ ಶೇ 5.5 ಮೌಲ್ಯವರ್ಧಿತ ತೆರಿಗೆಯ ವ್ಯಾಪ್ತಿಯಿಂದ ಬಿಯರ್, ವೈನ್ಗಳನ್ನು ಕೈಬಿಟ್ಟಿದ್ದಾರೆ. </div><p>‘ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ್ದರಿಂದಾಗಿ ಜನಸಾಮಾನ್ಯರಿಗೆ ಅಪಾರ ಸಂಕಷ್ಟ ಎದುರಾಯಿತು. ಗ್ರಾಮೀಣರು ಹಾಗೂ ರೈತರಿಗೆಸೇವೆ ನೀಡುವ ಸಹಕಾರ ವಲಯ ಅಕ್ಷರಶಃ ಸ್ತಬ್ಧವಾಯಿತು.</p><p>ಅದರಿಂದ ಸಾಧಿಸಿದ ಫಲಶ್ರುತಿ ಏನು ಎಂಬುದನ್ನು ಕೇಂದ್ರ ಸರ್ಕಾರ ತಿಳಿಸಬೇಕು’ ಎಂದು ಟೀಕಾ ಪ್ರಹಾರ ನಡೆಸಿದರು. ನೋಟು ರದ್ದತಿಯಿಂದಾಗಿ ದಸ್ತಾವೇಜು ನೋಂದಣಿ ಸಂಖ್ಯೆ ಇಳಿಮುಖವಾಯಿತು. ಇದರಿಂದ ₹1,350 ಕೋಟಿ ರಾಜಸ್ವ ನಷ್ಟ ವಾಯಿತು ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.</p><p><img alt="" src="https://cms.prajavani.net/sites/pv/files/article_images/2017/03/16/9999-ok.jpg" style="width: 700px; height: 262px;" data-original="/http://www.prajavani.net//sites/default/files/images/9999-ok.jpg"/></p><p>₹1,86,561 ಕೋಟಿ ಮೊತ್ತದ ಬಜೆಟ್ನಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ಪ್ರತ್ಯೇಕ ವಿಭಜನೆ ಮಾಡಿಲ್ಲ. ಕಳೆದ ಬಜೆಟ್ಗೆ ಹೋಲಿಸಿದರೆ ಬಜೆಟ್ ಅಂದಾಜು ಮೊತ್ತ ಶೇ 14.16ರಷ್ಟು ಹೆಚ್ಚಳವಾಗಿದೆ.</p><p>ವಿವಿಧ ಮೂಲಗಳಿಂದ ₹1,44,892 ಕೋಟಿ ರಾಜಸ್ವ ಜಮೆಯನ್ನು ನಿರೀಕ್ಷಿಸಲಾಗಿದೆ.</p><p><iframe allowfullscreen="" frameborder="0" height="315" src="https://www.youtube.com/embed/dGVOA1GwI4k" width="560"/></p><p><strong>ಜನಪ್ರಿಯ ಘೋಷಣೆಗಳ ಸರಮಾಲೆ: </strong>2013ರಲ್ಲಿ ರಾಜ್ಯದಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸುವುದಾಗಿ ಅಂದಿನ ಬಿಜೆಪಿ ಸರ್ಕಾರ ಪ್ರಕಟಿಸಿತ್ತು. ಅದಕ್ಕೆ ಇನ್ನಷ್ಟು ಸೇರಿಸಿ, 49 ತಾಲ್ಲೂಕುಗಳನ್ನು ರಚಿಸುವುದಾಗಿ ಬಜೆಟ್ನಲ್ಲಿ ಉಲ್ಲೇಖಿಸಿದ್ದರೂ, ಅದಕ್ಕೆ ಅನುದಾನ ಹಂಚಿಕೆ ಮಾಡಿಲ್ಲ.</p><p>ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ‘ಅಯ್ಯ ಕ್ಯಾಂಟಿನ್’ ಆರಂಭಿಸಲಾಗುತ್ತದೆ ಎಂದು ಕಳೆದ ಎರಡು ವರ್ಷದಿಂದ ಕೇಳಿ ಬರುತ್ತಿದ್ದ ಮಾತನ್ನು ಈ ಬಜೆಟ್ನಲ್ಲಿ ಸಾಕಾರಗೊಳಿಸುವ ತೀರ್ಮಾನ ಮಾಡಲಾಗಿದೆ.</p><p>ಬೆಂಗಳೂರಿನ 198 ವಾರ್ಡ್ಗಳಲ್ಲಿ ತಲಾ 1 ರಂತೆ <strong>‘ನಮ್ಮ ಕ್ಯಾಂಟಿನ್’</strong> ಆರಂಭಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳ ಸಹಕಾರದಲ್ಲಿ ‘ಸವಿರುಚಿ’ ಹೆಸರಿನಲ್ಲಿ ಸಂಚಾರಿ ಕ್ಯಾಂಟಿನ್ ಆರಂಭಿಸುವುದಾಗಿ ಪ್ರಕಟಿಸಿದ್ದರೂ, ರಿಯಾಯಿತಿ ದರದಲ್ಲಿ ಊಟ ನೀಡುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ.</p><p><strong>ದುರ್ಬಲರ ಶಿಕ್ಷಣಕ್ಕೆ ನೆರವು: </strong> ಐಐಟಿ,ಐಐಎಂನಲ್ಲಿ ಪ್ರವೇಶ ಪಡೆಯುವ ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ₹ 2 ಲಕ್ಷ ನೆರವು, ಎಸ್ಎಸ್ಎಲ್ಸಿ, ಪಿಯು, ಪದವಿ, ಸ್ನಾತಕೋತ್ತರ ಶಿಕ್ಷಣದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 4 ಪಟ್ಟು ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಹೆಣ್ಣು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಇರುವ ವಸತಿಸಹಿತ ಪ್ರಥಮದರ್ಜೆ ಕಾಲೇಜು ಆರಂಭಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.</p><p>ಇಡೀ ಶಿಕ್ಷಣ ವ್ಯವಸ್ಥೆಗೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ, ಶುಲ್ಕ, ಬೋಧನಾ ಸಂಪನ್ಮೂಲ, ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ನಿಯಂತ್ರಣ ಪಡೆಯಲು ಕರ್ನಾಟಕ ಶಾಲಾ ಶಿಕ್ಷಣ ನೀತಿ ರೂಪಿಸುವುದಾಗಿ ತಿಳಿಸಿದ್ದಾರೆ.</p><p>ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಕಿರಣ ಯೋಜನೆಯಡಿ ಶಿಕ್ಷಕರ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆ ಜಾರಿ, ಒಂದನೆ ತರಗತಿಯಿಂದ ಇಂಗ್ಲಿಷ್ ಭಾಷೆ ಕಲಿಸುವುದನ್ನು ಕಡ್ಡಾಯಗೊಳಿಸುವುದಾಗಿ ಹೇಳಿದ್ದಾರೆ.</p><p><strong>ಕಾರ್ಮಿಕರ ನಿವೃತ್ತಿ ವಯಸ್ಸು 60ಕ್ಕೆ</strong><br/> ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ಕ್ಕೆ ಏರಿಸಿದ ರೀತಿಯಲ್ಲಿ ಖಾಸಗಿ ವಲಯದ ಕಾರ್ಮಿಕರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇಲ್ಲಿಯವರೆಗೆ ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸು 58 ಆಗಿತ್ತು. 60ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ.</p><p><strong>ಚಿತ್ರಮಂದಿರ ದರ ಗರಿಷ್ಠ ₹ 200</strong><br/> ಮಲ್ಟಿಪ್ಲೆಕ್ಸ್ ಮತ್ತು ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಠ ಪ್ರವೇಶ ದರ ₹200ಕ್ಕೆ ನಿಗದಿ ಮಾಡಲಾಗಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗ ಳಲ್ಲಿನ ಪ್ರಮುಖ ಪ್ರದರ್ಶನ ಅವಧಿಯಲ್ಲಿ ಕನಿಷ್ಠ 1 ಚಿತ್ರಮಂದಿರದಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯಗೊಳಿಸಲಾಗಿದೆ.</p><p><strong>ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ</strong><br/> ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಶೇ 4ರ ಬಡ್ಡಿದ ರದಲ್ಲಿ ಸಾಲ ನೀಡಲಾಗುತ್ತಿತ್ತು.</p><p><iframe allowfullscreen="" frameborder="0" height="315" src="https://www.youtube.com/embed/U_TRsh3o-lY" width="560"/></p><p><strong>ಉತ್ತರಕರ್ನಾಟಕಕ್ಕೆ ಹೆಚ್ಚು ತಾಲ್ಲೂಕು</strong></p><p>ನೂತನವಾಗಿ ರಚಿಸಲು ಉದ್ದೇಶಿಸಿರುವ 49 ತಾಲ್ಲೂಕುಗಳ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಸಿಂಹಪಾಲು ಲಭ್ಯವಾಗಿದೆ.<br/> ವಿಜಯಪುರ ಜಿಲ್ಲೆಗೆ 7, ಕಲಬುರ್ಗಿ ಜಿಲ್ಲೆಗೆ 4, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ 3 ತಾಲ್ಲೂಕು ರಚನೆಗಳ ಭಾಗ್ಯ ಸಿಕ್ಕಿದೆ. ದಕ್ಷಿಣದ ಜಿಲ್ಲೆಗಳ ಪೈಕಿ ಉಡುಪಿಗೆ ಮಾತ್ರ 3 ತಾಲ್ಲೂಕುಗಳು ಸಿಕ್ಕಿವೆ.</p><p><strong>ಆರ್ಥಿಕ ವೃದ್ಧಿ ದರ ಕುಸಿತ</strong></p><p><strong>ಬೆಂಗಳೂರು:</strong> 2016–17ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 0.4ರಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.</p><p>ಎರಡು ವರ್ಷಗಳಿಂದ ಕಂಡು ಬಂದಿರುವ ನಿರಂತರ ಬರಗಾಲ ಮತ್ತು ನೋಟು ರದ್ದತಿಯ ಪರಿಣಾಮವಾಗಿ ಆರ್ಥಿಕ ವೃದ್ಧಿ ದರವು ಕಡಿಮೆಯಾಗಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಬಜೆಟ್ ಜತೆಗೆಯೇ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಈ ವಿವರಗಳಿವೆ.<br/> ಕೈಗಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಂಠಿತ ಗೊಂಡಿದ್ದೇ ಇದಕ್ಕೆ ಮುಖ್ಯ ಕಾರಣ ಎಂದೂ ಸಮೀಕ್ಷೆ ಹೇಳಿದೆ.</p><p>* ಯಾವುದೇ ಜನಪರ ಸರ್ಕಾರ ಅಭಿವೃದ್ಧಿ ವಿರೋಧಿ ಎಂಬ ಬಾಲಿಶ ಕಲ್ಪನೆ ವಿತ್ತೀಯ ವಲಯದಲ್ಲಿದೆ. ಅದನ್ನು ಒಡೆದು ಹಾಕುವಲ್ಲಿ ನನ್ನ ಸರ್ಕಾರ ಯಶಸ್ವಿಯಾಗಿದೆ</p><p><em><strong>– ಸಿದ್ದರಾಮಯ್ಯ, ಮುಖ್ಯಮಂತ್ರಿ</strong></em></p><p><iframe allowfullscreen="" frameborder="0" height="315" src="https://www.youtube.com/embed/xhq-6oxweto" width="560"/></p><p><img alt="" src="https://cms.prajavani.net/sites/pv/files/article_images/2017/03/16/tAX.jpg" style="width: 400px; height: 856px;" data-original="/http://www.prajavani.net//sites/default/files/images/tAX.jpg"/></p><p><strong>ಮುಖ್ಯಾಂಶ:</strong></p><p>ಹೊಸದಾಗಿ 49 ತಾಲ್ಲೂಕು ರಚನೆ * ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ * 30 ಜಿಲ್ಲೆಗಳಲ್ಲಿ ಸವಿರುಚಿ ಸಂಚಾರಿ ಕ್ಯಾಂಟಿನ್* ಅನ್ನಭಾಗ್ಯದ ಅಕ್ಕಿ 2 ಕೆ.ಜಿ ಹೆಚ್ಚಳ* ರಾಯಚೂರಿಗೆ ನೂತನ ವಿಶ್ವವಿದ್ಯಾಲಯ* ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ, ಕೋಲಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ* ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ₹175 ಕೋಟಿ ಅನುದಾನ</p></div>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.