‘ಪರಿಸರದ ಬಗ್ಗೆ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ನಮ್ಮ ಈ ಉದ್ಯಾನ ನಗರದಲ್ಲಿ ಕೆಲವರು ಅನ್ನ ತಿನ್ನುತ್ತಾರೆ, ಇನ್ನೂ ಕೆಲವರು ಕೆರೆಯನ್ನೇ ತಿನ್ನುತ್ತಾರೆ. ಹೀಗಾಗಿಯೇ 1,452 ಕೆರೆಯಿದ್ದ ಬೆಂಗಳೂರಿನಲ್ಲಿ ಈಗಿರುವುದು ಕೇವಲ 209 ಕೆರೆಗಳು’ ಎಂದು ಹೇಳಿದರು.
‘ಬೆಂಗಳೂರಿಗೆ ಬೇಕಾಗಿರುವುದು 18 ಟಿಎಂಸಿ ನೀರು. ನಗರದಲ್ಲಾಗುವ ಮಳೆನೀರನ್ನು ಸಂಗ್ರಹಿಸಿದರೆ 15 ಟಿಎಂಸಿ ನೀರು ಸಿಗುತ್ತದೆ. ಅದೇ ರೀತಿ ಕೆರೆ ಸಂರಕ್ಷಿಸಿದರೆ ಸುತ್ತಲಿನ ಅಂತರ್ಜಲ ಮಟ್ಟ ಏರುತ್ತದೆ’ ಎಂದು ಹೇಳಿದರು.