<div> <strong>ಮೈಸೂರು:</strong> ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾಮವೊಂದರ ಜನರು ಮತದಾನ ಮಾಡಲು ಮುಂದಾಗಲಿಲ್ಲ. ಬೆಳಿಗ್ಗೆ ಬೆರಳೆಣಿಕೆಯಷ್ಟು ಮಂದಿ ಓಟು ಹಾಕಿದ್ದರು. ಮಧ್ಯಾಹ್ನವಾದರೂ ಯಾವ ಪಕ್ಷದವರೂ ಇತ್ತ ಸುಳಿಯದಿರುವುದನ್ನು ನೋಡಿ ಗ್ರಾಮಸ್ಥರು ಗದ್ದಲವನ್ನೇ ನಡೆಸಿದರು.<br /> <div> ‘ಆ ಹಳ್ಳಿಯಲ್ಲಿ ಹಣ ಕೊಟ್ಟಿದ್ದಾರೆ. ನಮಗೆ ಈವರೆಗೂ ಹಣ ತಲುಪಿಲ್ಲ. ನಾವೆಂಗೆ ಓಟು ಹಾಕುವುದು’ ಎಂದು ಮತದಾನ ಮಾಡದೆ ದೂರವೇ ಉಳಿದಿದ್ದರು.</div><div> </div><div> ‘ಪಕ್ಕದೂರಿನವರಿಗೆ ಹಣ ನೀಡದಿದ್ದರೆ ನಾವೂ ಕೇಳುತ್ತಿರಲಿಲ್ಲ. ಅಲ್ಲಿ ಹಣ ಕೊಟ್ಟು ನಮಗೆ ಕೊಡದಿರುವುದು ಯಾವ ನ್ಯಾಯ?’ ಎಂದು ಬಹಿರಂಗವಾಗಿಯೇ ಜೋರು ಮಾಡಿದರು. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮುಖಂಡರೊಬ್ಬರು ಎಲ್ಲವನ್ನೂ ‘ಸರಿಮಾಡಿದ’ ಮೇಲೆ ಮತದಾನಕ್ಕೆ ಮುಂದಾದರು.</div><div> <br /> ಗ್ರಾಮಸ್ಥರು ಸಂಜೆ ಮೇಲೆ ಒಮ್ಮೆಲೆ ಮತದಾನಕ್ಕೆ ಬಂದಿದ್ದರಿಂದ ರಾತ್ರಿ 7 ಗಂಟೆಯವರೆಗೂ ಮತದಾನ ನಡೆಯಿತು. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದಕ್ಕೆ ಇದೊಂದು ಸಣ್ಣ ಉದಾಹರಣೆ.</div><div> </div><div> ‘ನಾನು ಸಾಕಷ್ಟು ಚುನಾವಣೆಗಳನ್ನು ನೋಡಿದ್ದೇನೆ. ಇಷ್ಟೊಂದು ಹಣ– ಮದ್ಯ ಹರಿಸಿದ ಚುನಾವಣೆ ಕಂಡಿಲ್ಲ. ಅದೂ ರಾಜಾರೋಷವಾಗಿ ಹಣ ಹಂಚಿಕೆ ಮಾಡಿದ್ದು ಅಸಹ್ಯ ಹುಟ್ಟಿಸಿತ್ತು’ ಎಂದು ನಂಜನಗೂಡು ಪಟ್ಟಣದ ಅಶೋಕಪುರಂ ನಿವಾಸಿ ರಾಜಾರಾವ್ ಹೇಳಿದ್ದು ಹಣ ಹಂಚಿಕೆಗೆ ಕನ್ನಡಿ ಹಿಡಿದಂತಿತ್ತು.<br /> </div><div> ‘ಎರಡೂ ಕ್ಷೇತ್ರಗಳಲ್ಲೂ ಹಣದ ಹೊಳೆಯಂತೂ ಹರಿದಿದೆ. ವ್ಯವಸ್ಥಿತವಾಗಿ ತಲುಪಿಸಿದ್ದೇವೆ. ಮತದಾರರನ್ನು ‘ಚೆನ್ನಾಗಿ ಗೌರವಿಸಿದ್ದೇವೆ’. ಚುನಾವಣೆಯಲ್ಲಿ ಶೇ 50ರಷ್ಟು ಹಣ ಕೆಲಸ ಮಾಡುತ್ತದೆ.</div><div> </div><div> ಈಗಿನ ಉಪಚುನಾವಣೆಯಲ್ಲಿ ಹಣ ಖರ್ಚು ಮಾಡಿರುವುದನ್ನು ನೋಡಿದರೆ ಮುಂದೆ ಉಪ ಚುನಾವಣೆಯನ್ನೇ ರದ್ದು ಮಾಡಬೇಕು ಎನಿಸುತ್ತದೆ. ಎಲ್ಲಿಂದ ಹಣ ತರುವುದು’ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ಹಣ ಹಂಚಿಕೆ ವಿಚಾರವನ್ನು ಬಿಚ್ಚಿಟ್ಟರು.<br /> </div><div> ಒಂದು ಅಂದಾಜಿನ ಪ್ರಕಾರ ಎರಡೂ ಕ್ಷೇತ್ರಗಳಿಗೆ ರಾಜಕೀಯ ಪಕ್ಷವೊಂದು ಸುಮಾರು ₹ 80 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆ ಪಕ್ಷದ ಮುಖಂಡರನ್ನು ಕೇಳಿದರೆ ‘ಅಷ್ಟು ಆಗಿರಬಹುದು. ಸ್ವಲ್ಪ ಹೆಚ್ಚೇ ಇರಬಹುದು’ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ‘ಹಣ ಕೆಲಸ ಮಾಡಿದರೆ ಎರಡೂ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಹಣ ಗೆಲುವು ತಂದುಕೊಡುತ್ತದೆ’ ಎಂದು ವಿಶ್ಲೇಷಿಸಿದರು.<br /> </div><div> ಹಣ ಹಂಚಿಕೆಯಲ್ಲಿ ಮತ್ತೊಂದು ಪಕ್ಷದವರೂ ಹಿಂದೆ ಬಿದ್ದಿಲ್ಲ. ‘ನಾವು ಅಷ್ಟೊಂದು ಹಣ ಖರ್ಚು ಮಾಡಿಲ್ಲ. ಅವರು ಮನೆಗೆ ನಾಲ್ಕೈದು ಸಾವಿರ ನೀಡಿದ್ದರೆ, ನಾವು ಅದರಲ್ಲಿ ಅರ್ಧದಷ್ಟು ಕೊಟ್ಟಿದ್ದೇವೆ. ಹಿಂದೆ ಕುಟುಂಬದ ಮುಖಂಡರಿಗೆ ಹಣ ಕೊಡಲಾಗುತ್ತಿತ್ತು. ಈ ಸಲ ಒಂದು ಮನೆಯಲ್ಲಿ ಇರುವ ಮತದಾರರ ಸಂಖ್ಯೆಯನ್ನು ಲೆಕ್ಕಹಾಕಿ, ಓಟಿನ ಆಧಾರದಲ್ಲಿ ಹಣ ನೀಡಲಾಗಿದೆ’ ಎಂದು ಮತ್ತೊಂದು ಪಕ್ಷದ ಮುಖಂಡರು ಹೇಳುತ್ತಾರೆ.</div><div> </div><div> ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಹಣ, ಜಾತಿ ಪ್ರಭಾವ ಕೆಲಸ ಮಾಡಿದೆ. ಈ ಎರಡು ವಿಚಾರಗಳು ಗೆಲುವು ತಂದುಕೊಡುತ್ತದೆ. ಚುನಾವಣೆಯಲ್ಲಿ ಹಣ ಬಿಟ್ಟರೆ ಬೇರೆ ವಿಷಯ ಕೆಲಸ ಮಾಡುವುದಿಲ್ಲ ಎಂದು ರಾಜಕೀಯ ಪಕ್ಷಗಳ ಮುಖಂಡರು ನೇರವಾಗಿಯೇ ಪ್ರಸ್ತಾಪಿಸುತ್ತಾರೆ.</div><div> </div><div> ದಾಖಲೆ ಮತದಾನ: ಎರಡೂ ಕ್ಷೇತ್ರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಾತದಾನವಾಗಿರುವುದು ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರದ ಸೂತ್ರವನ್ನು ಬದಲಿಸಿದೆ. (ನಂಜನಗೂಡು ಶೇ 77.45, ಗುಂಡ್ಲುಪೇಟೆ ಶೇ 87.10) ಮತದಾನದ ಪ್ರಮಾಣ ಹೆಚ್ಚಾಗಿರುವುದು ನಮಗೇ ಅನುಕೂಲ ಆಗಲಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.</div><div> </div><div> ಶೇ 50ರಷ್ಟು ಹಾಗೂ ಅದಕ್ಕಿಂತ ಕಡಿಮೆ ಮತದಾನವಾದ ಸಾಕಷ್ಟು ಸಂದರ್ಭಗಳಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಈಗ ಹೆಚ್ಚು ಮತದಾನ ಆಗಿರುವುದನ್ನು ನೋಡಿದರೆ ಗೆಲುವು ನಮ್ಮ ಕಡೆಗೆ ಇರಬಹುದು ಎನಿಸುತ್ತದೆ ಎಂದು ತಮ್ಮದೇ ವ್ಯಾಖ್ಯಾನ ಮುಂದಿಡುತ್ತಾರೆ.</div><div> </div><div> ಕಾಂಗ್ರೆಸ್ ಮುಖಂಡರು ಇದಕ್ಕಿಂತ ಭಿನ್ನವಾದ ಲೆಕ್ಕಾಚಾರ ಮಂಡಿಸುತ್ತಾರೆ. ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.<br /> <br /> ಈ ಎರಡೂ ಕ್ಷೇತ್ರದ ಮಟ್ಟಿಗೆ ಮತದಾನ ಅಧಿಕವಾಗಿದ್ದಾಗ ಹಾಗೂ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಹಿಂದಿನ ಫಲಿತಾಂಶ ಗಮನಿಸಿದರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಮತದಾನ ಹೆಚ್ಚಾಗಿರುವುದು ಕಾಂಗ್ರೆಸ್ಗೆ ಲಾಭ ತಂದುಕೊಡಲಿದೆ ಎಂದು ವಿವರಣೆ ನೀಡುತ್ತಾರೆ.</div><div> ***</div><div> <strong>ಮೈಸೂರು: </strong>ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ನವರು ₹ 100 ಕೋಟಿ ಹಣ ಹಂಚಿದ್ದಾರೆ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಇಲ್ಲಿ ಸೋಮವಾರ ಆರೋಪಿಸಿದರು.<br /> <br /> ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಉಪಚುನಾವಣೆಯ ಅಕ್ರಮಗಳಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜರುಗಿದ ಉಪಚುನಾವಣೆಗಿಂತ ಈ ಬಾರಿ ಹೆಚ್ಚು ಅಕ್ರಮ ನಡೆದಿದೆ’ ಎಂದು ದೂರಿದರು.</div><div> ***</div><div> <strong>ಮತ ವ್ಯಾಪಾರದ ಕತೆ...</strong><br /> ಗುಂಡ್ಲುಪೇಟೆ ಕ್ಷೇತ್ರದ ಹಳ್ಳಿಯೊಂದರ ಕುಟುಂಬವೊಂದರಲ್ಲಿ ಮೂರು ಮತಗಳು ಇವೆ. ಪ್ರತಿ ಓಟಿಗೆ ₹ 1,000ದಂತೆ ₹ 3,000 ಹಣವನ್ನು ರಾಜಕೀಯ ಪಕ್ಷವೊಂದರ ಮುಖಂಡರು ನೀಡುತ್ತಾರೆ.<br /> <br /> ಸ್ವಲ್ಪ ಸಮಯ ಬಿಟ್ಟು ಮತ್ತೊಂದು ಪಕ್ಷದ ಮುಖಂಡರು ಆ ಮನೆಗೆ ಹೋಗಿ ಪ್ರತಿ ಓಟಿಗೆ ₹ 500ರಂತೆ ₹ 1500 ಹಣ ಕೊಡುತ್ತಾರೆ. ಆ ಪಕ್ಷದವರು ತಲಾ ಓಟಿಗೆ ಸಾವಿರ ಕೊಟ್ಟಿದ್ದಾರೆ. ನೀವು ಕಡಿಮೆ ನೀಡಿದ್ದೀರಿ ಎಂದು ತಕರಾರು ತೆಗೆಯುತ್ತಾರೆ. ಆಗ ಈ ಪಕ್ಷದವರೂ ತಲಾ ಓಟಿಗೆ ₹ 1,000 ದಂತೆ ಹಣ ಕೊಡುತ್ತಾರೆ.<br /> <br /> ಮತದಾನ ನಡೆದ ನಂತರ ಯಾರಿಗೆ ಓಟು ಹಾಕಿದ್ದೀರಿ ಎಂದು ಕೇಳಿದರೆ, ಮೊದಲು ಹಣ ಕೊಟ್ಟವರಿಗೆ ಎರಡು ಮತ, ನಂತರ ಹಣ ಕೊಟ್ಟವರಿಗೆ ಒಂದು ಮತ ಹಾಕಿದ್ದೇವೆ. ಇಬ್ಬರಿಗೂ ಓಟು ಕೊಟ್ಟಿದ್ದೇವೆ ಎಂದರಂತೆ!</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಮೈಸೂರು:</strong> ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾಮವೊಂದರ ಜನರು ಮತದಾನ ಮಾಡಲು ಮುಂದಾಗಲಿಲ್ಲ. ಬೆಳಿಗ್ಗೆ ಬೆರಳೆಣಿಕೆಯಷ್ಟು ಮಂದಿ ಓಟು ಹಾಕಿದ್ದರು. ಮಧ್ಯಾಹ್ನವಾದರೂ ಯಾವ ಪಕ್ಷದವರೂ ಇತ್ತ ಸುಳಿಯದಿರುವುದನ್ನು ನೋಡಿ ಗ್ರಾಮಸ್ಥರು ಗದ್ದಲವನ್ನೇ ನಡೆಸಿದರು.<br /> <div> ‘ಆ ಹಳ್ಳಿಯಲ್ಲಿ ಹಣ ಕೊಟ್ಟಿದ್ದಾರೆ. ನಮಗೆ ಈವರೆಗೂ ಹಣ ತಲುಪಿಲ್ಲ. ನಾವೆಂಗೆ ಓಟು ಹಾಕುವುದು’ ಎಂದು ಮತದಾನ ಮಾಡದೆ ದೂರವೇ ಉಳಿದಿದ್ದರು.</div><div> </div><div> ‘ಪಕ್ಕದೂರಿನವರಿಗೆ ಹಣ ನೀಡದಿದ್ದರೆ ನಾವೂ ಕೇಳುತ್ತಿರಲಿಲ್ಲ. ಅಲ್ಲಿ ಹಣ ಕೊಟ್ಟು ನಮಗೆ ಕೊಡದಿರುವುದು ಯಾವ ನ್ಯಾಯ?’ ಎಂದು ಬಹಿರಂಗವಾಗಿಯೇ ಜೋರು ಮಾಡಿದರು. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮುಖಂಡರೊಬ್ಬರು ಎಲ್ಲವನ್ನೂ ‘ಸರಿಮಾಡಿದ’ ಮೇಲೆ ಮತದಾನಕ್ಕೆ ಮುಂದಾದರು.</div><div> <br /> ಗ್ರಾಮಸ್ಥರು ಸಂಜೆ ಮೇಲೆ ಒಮ್ಮೆಲೆ ಮತದಾನಕ್ಕೆ ಬಂದಿದ್ದರಿಂದ ರಾತ್ರಿ 7 ಗಂಟೆಯವರೆಗೂ ಮತದಾನ ನಡೆಯಿತು. ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದಕ್ಕೆ ಇದೊಂದು ಸಣ್ಣ ಉದಾಹರಣೆ.</div><div> </div><div> ‘ನಾನು ಸಾಕಷ್ಟು ಚುನಾವಣೆಗಳನ್ನು ನೋಡಿದ್ದೇನೆ. ಇಷ್ಟೊಂದು ಹಣ– ಮದ್ಯ ಹರಿಸಿದ ಚುನಾವಣೆ ಕಂಡಿಲ್ಲ. ಅದೂ ರಾಜಾರೋಷವಾಗಿ ಹಣ ಹಂಚಿಕೆ ಮಾಡಿದ್ದು ಅಸಹ್ಯ ಹುಟ್ಟಿಸಿತ್ತು’ ಎಂದು ನಂಜನಗೂಡು ಪಟ್ಟಣದ ಅಶೋಕಪುರಂ ನಿವಾಸಿ ರಾಜಾರಾವ್ ಹೇಳಿದ್ದು ಹಣ ಹಂಚಿಕೆಗೆ ಕನ್ನಡಿ ಹಿಡಿದಂತಿತ್ತು.<br /> </div><div> ‘ಎರಡೂ ಕ್ಷೇತ್ರಗಳಲ್ಲೂ ಹಣದ ಹೊಳೆಯಂತೂ ಹರಿದಿದೆ. ವ್ಯವಸ್ಥಿತವಾಗಿ ತಲುಪಿಸಿದ್ದೇವೆ. ಮತದಾರರನ್ನು ‘ಚೆನ್ನಾಗಿ ಗೌರವಿಸಿದ್ದೇವೆ’. ಚುನಾವಣೆಯಲ್ಲಿ ಶೇ 50ರಷ್ಟು ಹಣ ಕೆಲಸ ಮಾಡುತ್ತದೆ.</div><div> </div><div> ಈಗಿನ ಉಪಚುನಾವಣೆಯಲ್ಲಿ ಹಣ ಖರ್ಚು ಮಾಡಿರುವುದನ್ನು ನೋಡಿದರೆ ಮುಂದೆ ಉಪ ಚುನಾವಣೆಯನ್ನೇ ರದ್ದು ಮಾಡಬೇಕು ಎನಿಸುತ್ತದೆ. ಎಲ್ಲಿಂದ ಹಣ ತರುವುದು’ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ಹಣ ಹಂಚಿಕೆ ವಿಚಾರವನ್ನು ಬಿಚ್ಚಿಟ್ಟರು.<br /> </div><div> ಒಂದು ಅಂದಾಜಿನ ಪ್ರಕಾರ ಎರಡೂ ಕ್ಷೇತ್ರಗಳಿಗೆ ರಾಜಕೀಯ ಪಕ್ಷವೊಂದು ಸುಮಾರು ₹ 80 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆ ಪಕ್ಷದ ಮುಖಂಡರನ್ನು ಕೇಳಿದರೆ ‘ಅಷ್ಟು ಆಗಿರಬಹುದು. ಸ್ವಲ್ಪ ಹೆಚ್ಚೇ ಇರಬಹುದು’ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ‘ಹಣ ಕೆಲಸ ಮಾಡಿದರೆ ಎರಡೂ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಹಣ ಗೆಲುವು ತಂದುಕೊಡುತ್ತದೆ’ ಎಂದು ವಿಶ್ಲೇಷಿಸಿದರು.<br /> </div><div> ಹಣ ಹಂಚಿಕೆಯಲ್ಲಿ ಮತ್ತೊಂದು ಪಕ್ಷದವರೂ ಹಿಂದೆ ಬಿದ್ದಿಲ್ಲ. ‘ನಾವು ಅಷ್ಟೊಂದು ಹಣ ಖರ್ಚು ಮಾಡಿಲ್ಲ. ಅವರು ಮನೆಗೆ ನಾಲ್ಕೈದು ಸಾವಿರ ನೀಡಿದ್ದರೆ, ನಾವು ಅದರಲ್ಲಿ ಅರ್ಧದಷ್ಟು ಕೊಟ್ಟಿದ್ದೇವೆ. ಹಿಂದೆ ಕುಟುಂಬದ ಮುಖಂಡರಿಗೆ ಹಣ ಕೊಡಲಾಗುತ್ತಿತ್ತು. ಈ ಸಲ ಒಂದು ಮನೆಯಲ್ಲಿ ಇರುವ ಮತದಾರರ ಸಂಖ್ಯೆಯನ್ನು ಲೆಕ್ಕಹಾಕಿ, ಓಟಿನ ಆಧಾರದಲ್ಲಿ ಹಣ ನೀಡಲಾಗಿದೆ’ ಎಂದು ಮತ್ತೊಂದು ಪಕ್ಷದ ಮುಖಂಡರು ಹೇಳುತ್ತಾರೆ.</div><div> </div><div> ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಹಣ, ಜಾತಿ ಪ್ರಭಾವ ಕೆಲಸ ಮಾಡಿದೆ. ಈ ಎರಡು ವಿಚಾರಗಳು ಗೆಲುವು ತಂದುಕೊಡುತ್ತದೆ. ಚುನಾವಣೆಯಲ್ಲಿ ಹಣ ಬಿಟ್ಟರೆ ಬೇರೆ ವಿಷಯ ಕೆಲಸ ಮಾಡುವುದಿಲ್ಲ ಎಂದು ರಾಜಕೀಯ ಪಕ್ಷಗಳ ಮುಖಂಡರು ನೇರವಾಗಿಯೇ ಪ್ರಸ್ತಾಪಿಸುತ್ತಾರೆ.</div><div> </div><div> ದಾಖಲೆ ಮತದಾನ: ಎರಡೂ ಕ್ಷೇತ್ರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಾತದಾನವಾಗಿರುವುದು ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರದ ಸೂತ್ರವನ್ನು ಬದಲಿಸಿದೆ. (ನಂಜನಗೂಡು ಶೇ 77.45, ಗುಂಡ್ಲುಪೇಟೆ ಶೇ 87.10) ಮತದಾನದ ಪ್ರಮಾಣ ಹೆಚ್ಚಾಗಿರುವುದು ನಮಗೇ ಅನುಕೂಲ ಆಗಲಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.</div><div> </div><div> ಶೇ 50ರಷ್ಟು ಹಾಗೂ ಅದಕ್ಕಿಂತ ಕಡಿಮೆ ಮತದಾನವಾದ ಸಾಕಷ್ಟು ಸಂದರ್ಭಗಳಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಈಗ ಹೆಚ್ಚು ಮತದಾನ ಆಗಿರುವುದನ್ನು ನೋಡಿದರೆ ಗೆಲುವು ನಮ್ಮ ಕಡೆಗೆ ಇರಬಹುದು ಎನಿಸುತ್ತದೆ ಎಂದು ತಮ್ಮದೇ ವ್ಯಾಖ್ಯಾನ ಮುಂದಿಡುತ್ತಾರೆ.</div><div> </div><div> ಕಾಂಗ್ರೆಸ್ ಮುಖಂಡರು ಇದಕ್ಕಿಂತ ಭಿನ್ನವಾದ ಲೆಕ್ಕಾಚಾರ ಮಂಡಿಸುತ್ತಾರೆ. ನಂಜನಗೂಡು ಕ್ಷೇತ್ರದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ 76.18, 2008ರಲ್ಲಿ ಶೇ 71.9ರಷ್ಟು, ಗುಂಡ್ಲಪೇಟೆ ಕ್ಷೇತ್ರದಲ್ಲಿ 2013ರಲ್ಲಿ ಶೇ 85.25, 2008ರಲ್ಲಿ ಶೇ 81.27ರಷ್ಟು ಮತದಾನವಾಗಿತ್ತು.<br /> <br /> ಈ ಎರಡೂ ಕ್ಷೇತ್ರದ ಮಟ್ಟಿಗೆ ಮತದಾನ ಅಧಿಕವಾಗಿದ್ದಾಗ ಹಾಗೂ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಹಿಂದಿನ ಫಲಿತಾಂಶ ಗಮನಿಸಿದರೆ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಮತದಾನ ಹೆಚ್ಚಾಗಿರುವುದು ಕಾಂಗ್ರೆಸ್ಗೆ ಲಾಭ ತಂದುಕೊಡಲಿದೆ ಎಂದು ವಿವರಣೆ ನೀಡುತ್ತಾರೆ.</div><div> ***</div><div> <strong>ಮೈಸೂರು: </strong>ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ನವರು ₹ 100 ಕೋಟಿ ಹಣ ಹಂಚಿದ್ದಾರೆ ಎಂದು ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಇಲ್ಲಿ ಸೋಮವಾರ ಆರೋಪಿಸಿದರು.<br /> <br /> ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಉಪಚುನಾವಣೆಯ ಅಕ್ರಮಗಳಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜರುಗಿದ ಉಪಚುನಾವಣೆಗಿಂತ ಈ ಬಾರಿ ಹೆಚ್ಚು ಅಕ್ರಮ ನಡೆದಿದೆ’ ಎಂದು ದೂರಿದರು.</div><div> ***</div><div> <strong>ಮತ ವ್ಯಾಪಾರದ ಕತೆ...</strong><br /> ಗುಂಡ್ಲುಪೇಟೆ ಕ್ಷೇತ್ರದ ಹಳ್ಳಿಯೊಂದರ ಕುಟುಂಬವೊಂದರಲ್ಲಿ ಮೂರು ಮತಗಳು ಇವೆ. ಪ್ರತಿ ಓಟಿಗೆ ₹ 1,000ದಂತೆ ₹ 3,000 ಹಣವನ್ನು ರಾಜಕೀಯ ಪಕ್ಷವೊಂದರ ಮುಖಂಡರು ನೀಡುತ್ತಾರೆ.<br /> <br /> ಸ್ವಲ್ಪ ಸಮಯ ಬಿಟ್ಟು ಮತ್ತೊಂದು ಪಕ್ಷದ ಮುಖಂಡರು ಆ ಮನೆಗೆ ಹೋಗಿ ಪ್ರತಿ ಓಟಿಗೆ ₹ 500ರಂತೆ ₹ 1500 ಹಣ ಕೊಡುತ್ತಾರೆ. ಆ ಪಕ್ಷದವರು ತಲಾ ಓಟಿಗೆ ಸಾವಿರ ಕೊಟ್ಟಿದ್ದಾರೆ. ನೀವು ಕಡಿಮೆ ನೀಡಿದ್ದೀರಿ ಎಂದು ತಕರಾರು ತೆಗೆಯುತ್ತಾರೆ. ಆಗ ಈ ಪಕ್ಷದವರೂ ತಲಾ ಓಟಿಗೆ ₹ 1,000 ದಂತೆ ಹಣ ಕೊಡುತ್ತಾರೆ.<br /> <br /> ಮತದಾನ ನಡೆದ ನಂತರ ಯಾರಿಗೆ ಓಟು ಹಾಕಿದ್ದೀರಿ ಎಂದು ಕೇಳಿದರೆ, ಮೊದಲು ಹಣ ಕೊಟ್ಟವರಿಗೆ ಎರಡು ಮತ, ನಂತರ ಹಣ ಕೊಟ್ಟವರಿಗೆ ಒಂದು ಮತ ಹಾಕಿದ್ದೇವೆ. ಇಬ್ಬರಿಗೂ ಓಟು ಕೊಟ್ಟಿದ್ದೇವೆ ಎಂದರಂತೆ!</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>