‘ಆಸ್ಪತ್ರೆಯಲ್ಲಿ ಶವಾಗಾರ ಪರೀಕ್ಷೆ ಮಾಡಿಸಲು ವಾರುಸುದಾರರಿಂದ ನೌಕರರು ಹಾಗೂ ಕೆಲವು ವೈದ್ಯರು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಪುರಸಭೆ ಸದಸ್ಯ ಮುರಳಿಧರ್ ದೂರಿದರು.ಆರೋಗ್ಯಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ,‘ಆರೋಗ್ಯಾಧಿಕಾರಿ ಆಸ್ಪತ್ರೆಯಲ್ಲಿದ್ದ ಡಿ ಗ್ರೂಪ್ ನೌಕರರ ಸಮಸ್ಯೆ ನಿವಾರಣೆಯಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ 32 ಡಿ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ. ಹಳೇ ಶಸ್ತ್ರ ಚಿಕಿತ್ಸಾ ಕೊಠಡಿಯಿಂದ ಸ್ಕ್ಯಾನಿಂಗ್ ಕೊಠಡಿ, ರಕ್ತ ಶೇಖರಣ ಕೊಠಡಿಗಳಿಗೆ ಜನರೇಟರ್ ಸಂಪರ್ಕ ಕಲ್ಪಿಸಲಾಗುವುದು’ ಎಂದು ತಿಳಿಸಿದರು.