ತಮಟೆ, ನಗಾರಿ ಪೂಜಾ ಪಟಗಳ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿ ದರ್ಶನ ಪಡೆದರು. ಕೆಲ ಭಕ್ತರು ಬಾಯಿ ಬೀಗ, ತಲೆಮುಡಿ ಹರಕೆ ಸಮರ್ಪಿಸಿದರು.ಬಳಿಕ ಬಂದ ಸಾವಿರಾರು ಭಕ್ತರಿಗೆ ದೇಗುಲದ ಆವರಣದಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಿತು. ದೇಗುಲ ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳಾದ ಸತ್ಯಪ್ಪ, ಯೋಗಾನಂದ ಇದ್ದರು.ಸಂಜೆ ದೇಗುಲದ ಆವರಣದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಭಕ್ತಿಗೀತೆಗಳ ಗಾಯನ, ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.