ರಾಜ್ಯದಲ್ಲಿ ಭೀಕರ ಜಲಕ್ಷಾಮ ಜನರ ಬದುಕನ್ನೆ ಹಿಂಡಿ ಹಿಪ್ಪೆ ಮಾಡಿದೆ. ಈ ಪ್ರದೇಶದ ರೈತರ ಹಾಗೂ ಜನರ ಪಾಲಿಗೆ ಜೀವನಾಡಿ ಯಾಗಿರುವ ಕೃಷ್ಣೆ ಬತ್ತಿದಾದ ಸಮಸ್ಯೆ ಹೇಳತೀರದಷ್ಟಾಗಿತ್ತು. ಜನ-ಜಾನುವಾರುಗಳಿಗೂ ಕುಡಿಯಲು ನೀರಿಲ್ಲದೇ ಸಂಕಷ್ಟದ ಸ್ಥಿತಿ ಬಂದಿದೆ.ಸಂಸದ ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಮುಂಬೈಗೆ ತೆರಳಿತ್ತು.