ಮಠದ ಆವರಣವು ಸೇರಿದಂತೆ ಸುತ್ತಮುತ್ತಲಿನ ಮನೆ, ಕಟ್ಟಡಗಳ ಮಾಳಿಗೆ, ಮರಗಳ ಮೇಲೆ ಒಂದಿಷ್ಟೂ ಸ್ಥಳವನ್ನು ಬಿಡದೆ ಜನರು ಕುಳಿತುಕೊಂಡ ರಥೋತ್ಸವವನ್ನು ಕಣ್ಣುತುಂಬಿಕೊಂಡರು. ಜನರು ರಥವು ಸಾಗಿ ಮರಳಿ ಬರುವ ದಾರಿಯುದ್ದಕ್ಕೂ ತೆಂಗು, ಬಾಳೆಹಣ್ಣು, ಉತ್ತತ್ತಿ, ಬತ್ತಾಸು, ಹೂವುಗಳನ್ನು ಸಮರ್ಪಿಸಿ ಪುಣಿತರಾದರು.
ರಥೋತ್ಸವದ ನಂತರ ಜರುಗಿದ ಅನ್ನಸಂತರ್ಪಣೆಯಲ್ಲಿ ಜಾತಿ, ಮತ, ಮೇಲು, ಕೀಳು ಬೇಧ ಇಲ್ಲದೆ ಸಹಸ್ರಾರು ಜನರು ಭಾಗವಹಿಸಿ ಭಾವೈಕ್ಯತೆಗೆ ಸಾಕ್ಷಿಯಾದರು.