ಕಾರಟಗಿ: ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಶಿವರಾಜ್ ತಂಗಡಗಿ ಸೋಮವಾರ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.
ಬದಲಾಗುವ ವಾತಾವರಣಕ್ಕೆ ತಕ್ಕಂತೆ ಜಾನುವಾರುಗಳಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಬೇಸಿಗೆ ಸಮಯದಲ್ಲಿ ಕಾಲು, ಬಾಯಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ನಿರೋಧಕ ಲಸಿಕೆ ಹಾಕಿಸುವುದರೊಂದಿಗೆ ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ತಂಗಡಗಿ ಹೇಳಿದರು.
ಪಶುಆಸ್ಪತ್ರೆ ಪ್ರಭಾರ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಹಳ್ಳದ ಮಾತನಾಡಿ, ಮೇ 9ರವರೆಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಲಸಿಕೆ ಹಾಕಲು 7 ತಂಡ ರಚಿಸಲಾಗಿದ್ದು, ತಂಡಗಳು ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕುವರು ಎಂದರು.
ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಮಲ್ಲಯ್ಯ, ವಿಶೇಷ ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಉದ್ಯಮಿ ಕೆ.ಸಿದ್ದನಗೌಡ, ಬಾಪುಗೌಡ ಹುಳ್ಕಿಹಾಳ, ಡಾ.ಮಹೇಂದ್ರ, ಸಿಬ್ಬಂದಿ ಮಲ್ಕಪ್ಪ, ಕನಕಪ್ಪ, ಚಂದ್ರಕಾಂತ, ಅಮೃತ, ಗೋಣೆಪ್ಪ ಉಪಸ್ಥಿತರಿದ್ದರು.