ಸರ್ಕಾರ ಶುಲ್ಕ ಪಾವತಿಸುತ್ತದೆ ಎಂಬ ಕಾರಣದಿಂದಲೇ ಆರ್ಟಿಇ ಅಡಿ ಮಕ್ಕಳನ್ನು ಶಾಲೆಗೆ ದಾಖಲಿಸಿದ್ದೇವೆ. ಆದರೆ, ಶಿಕ್ಷಣ ಸಂಸ್ಥೆ ಪ್ರವೇಶ ಶುಲ್ಕ ಪಾವತಿಸುವಂತೆ ಹೇಳುತ್ತಿದೆ. ವಾಹನ ದಟ್ಟಣೆ, ಕಟ್ಟಡ ಕೊರತೆ ಹಾಗೂ ನೀರಿನ ಸಮಸ್ಯೆಗಳ ನೆಪವೊಡ್ಡಿ ವರ್ಗಾವಣೆಗೆ ಮುಂದಾಗಿದೆ. ಹಣದ ಆಮಿಷಕ್ಕೆ ಶಿಕ್ಷಣ ಸಂಸ್ಥೆ ಹಾಗೂ ಅಧಿಕಾರಿಗಳು ಮಕ್ಕಳ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.