ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರಸನ್ನಕುಮಾರ ರೈ, ‘ಕ್ರಿಕೆಟ್ ವೈಯಕ್ತಿಕ ಆಟವಲ್ಲ. ಸಂಘಟಿತ ಆಟ. ಕ್ರಿಕೆಟ್ ದೈಹಿಕ ಸಾಮರ್ಥ್ಯದ ಜತೆಗೆ ಒಳ್ಳೆಯ ಮನುಷ್ಯರನ್ನು ರೂಪಿಸುತ್ತದೆ. ತರಬೇತಿಯನ್ನು ಗಂಭೀರವಾಗಿ ತೆಗೆದು ಕೊಂಡು ಉತ್ತಮ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್, ಮೋಹನ್ ಚಂದ್ರ ನಂಬಿಯಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷ ರತನ್ ಕುಮಾರ್, ಸಂಸ್ಥೆ ಅಧ್ಯಕ್ಷೆ ಶಾಂತಿ ಮೋಹನ್ ವೇದಿಕೆಯಲ್ಲಿದ್ದರು. ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ಬಾಲಕೃಷ್ಣ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಅಕಾಡೆಮಿ ಕಾರ್ಯದರ್ಶಿ ಸಂತೋಷ್ ಮಿಸ್ಕಿತ್ ಪಾಲ್ಗೊಂಡಿದ್ದರು.ತರಬೇತುದಾರರಾದ ಶ್ರೀಲಂಕಾದ ಸಂಪತ್ ಪಿರೇರಾ, ಕೇರಳದ ಶ್ರೀಕಾಂತ ಅವರನ್ನು ಗೌರವಿಸಲಾಯಿತು.