ಬಳ್ಳಾರಿ: ‘ನಮ್ಮಪ್ಪ ಕೃಷಿ ಕೂಲಿಕಾರರು, ಅಮ್ಮನೂ ಕೂಲಿ ಮಾಡುತ್ತಾರೆ. ನಾನೂ ರಜೆ ದಿನಗಳಲ್ಲಿ ಕೂಲಿ ಮಾಡಲು ಹೋಗುತ್ತಿದ್ದೆ. ಕಾಲೇಜಿಗೆ ಟಾಪರ್ ಆಗಬೇಕು ಎಂದುಕೊಂಡೆ. ಈಗ ಅದಕ್ಕೂ ಹೆಚ್ಚಿನ ಸಾಧನೆ ಮಾಡಿರುವೆ’ –ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯಧಿಕ ಅಂಕ (589) ಪಡೆದಿರುವ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿರುವ ಇಂದೂ ಕಾಲೇಜಿನ ವಿದ್ಯಾರ್ಥಿನಿ ಬಿ.ಚೈತ್ರಾ ಅವರ ಮನದಾಳದ ಮಾತುಗಳಿವು.