ಶಿಕ್ಷಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಸಭೆ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಬಿ.ಇಡಿ ಮತ್ತು ಟಿಇಟಿ ಪರೀಕ್ಷೆಯ ಮಾನದಂಡದೊಂದಿಗೆ ನೇರ ನೇಮಕಾತಿ ಮಾಡುವುದರಿಂದ ನೇಮಕಾತಿಯಲ್ಲಿ ಆಗುವ ವಿಳಂಬವನ್ನು ತಪ್ಪಿಸಬಹುದು.
ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳ ಸಬಲೀಕರಣ ಇಂದಿನ ತುರ್ತು ಅಗತ್ಯ. ಅದಕ್ಕಾಗಿ ಶಿಕ್ಷಕರ ಕೊರತೆ ನೀಗುವ ಕ್ರಮ ಶ್ಲಾಘನೀಯ.
ಪೂಜಾ ಜೈನ್, ನರಸಿಂಹರಾಜಪುರ