ಸುರಪುರ ಗ್ರೇಡ್-2 ತಹಶೀಲ್ದಾರ್ ಸುಫಿಯಾ ಸುಲ್ತಾನ್, ದೇವಾಪುರ ಜೆಸ್ಕಾಂ ಅಧಿಕಾರಿ ತುಕರಾಮ್, ಭೂ ಸೇನಾ ನಿಗಮದ ಅಧಿಕಾರಿ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ ನಂತರ ಅಲ್ಲಿಂದ ಶವ ಸಾಗಿಸಲಾಯಿತು.
ಪುರಸಭೆ ಸದಸ್ಯ ಶರಣಕುಮಾರ ಸೊಲ್ಲಾಪುರ, ಭೀಮನಗೌಡ ಹಳ್ಳಿ, ನಿಂಗಾನಾಯ್ಕ ರಾಠೋಡ, ಪವಡೆಪ್ಪ ಮ್ಯಾಗೇರಿ, ಗುಡದಪ್ಪ ಬಿಳೆಭಾವಿ, ಪರಮಣ್ಣ ದೊಡ್ಡಮನಿ, ಮಹಿಬೂಬ ಸುರಪುರ, ಬುಚ್ಚಪ್ಪ ಗುರಿಕಾರ, ಮುದ್ದಣ್ಣ ಅಮ್ಮಾಪುರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.