ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಕುರಿತಂತೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಲೇಖನ ಸರಣಿ ಪ್ರಜ್ಞಾವಂತರು ಮತ್ತು ವಿವೇಕಿಗಳ ಕಣ್ಣು ತೆರೆಸುವಂತಿದೆ.
ಯೋಜನೆ ಜಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಮರಗಳು ಬಲಿಯಾಗುವುದರ ಜೊತೆಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗುತ್ತದೆ. ಪ್ರಾಣಿಗಳ ನೆಲೆಯೂ ತೊಂದರೆಗೆ ಒಳಗಾಗುತ್ತದೆ.
ಪರಿಸರವಾದಿ ಪಾಂಡುರಂಗ ಹೆಗಡೆ ಅವರು ಹೇಳಿರುವಂತೆ ಈ ಯೋಜನೆ ಪ್ರಾಯೋಗಿಕವಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಯಾವುದೇ ದೃಷ್ಟಿಯಿಂದ ನೋಡಿದರೂ ಇದನ್ನು ಕೈಬಿಡುವುದೇ ಸೂಕ್ತ. ಇಲ್ಲದಿದ್ದಲ್ಲಿ ಖಂಡಿತವಾಗಿಯೂ ಕರ್ನಾಟಕ ಮರುಭೂಮಿಯಾಗುವ ದಿನ ದೂರವಿಲ್ಲ.
ಡಿ.ವಿ. ಹೆಗಡೆ, ಬೆಂಗಳೂರು