ಇದು ಯೋಜನೆಯೊಂದರ ಅನುಷ್ಠಾನದ ಹಂತದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಅಗತ್ಯ ಮಾಹಿತಿಯನ್ನು ಕೊಡಲಿದ್ದೇವೆ. ಹುಬ್ಬಳ್ಳಿ– ಅಂಕೋಲಾ ಮಾರ್ಗ ಕುರಿತು 10 ವರ್ಷಗಳ ಹಿಂದೆ ನೀಡಲಾದ ವರದಿ ಆಧರಿಸಿ ಈಗ ಚರ್ಚೆ ನಡೆಯುತ್ತಿದೆ. ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದೆ. ಮೊದಲು ಒಂದು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಈಗ 600 ಹೆಕ್ಟೇರ್ ಅರಣ್ಯದಲ್ಲಿ ರೈಲು ಮಾರ್ಗ ಹಾದುಹೋಗಲಿದೆ’ ಎಂದರು.