ಕನ್ನಡ ಅಧ್ಯಯನ ವಿಭಾಗದ ಪಿಎಚ್ಡಿ ವಿದ್ಯಾರ್ಥಿನಿ ಬಸಮ್ಮ ಗಂಗನಳ್ಳಿ ಎಂಬುವವರ ಬಳಿ ₹ 2ಲಕ್ಷ ಲಂಚ ಕೇಳಿದ ಆರೋಪವನ್ನು ಹಿರೇಮಠ ಅವರು ಎದುರಿಸುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ಸತ್ಯ ಶೋಧನಾ ಸಮಿತಿಯು ಅವರಿಗೆ ಮಾರ್ಗದರ್ಶನ ಅರ್ಹತೆ ನೀಡಬಾರದು. ಅವರ ಬಳಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಇತರ ಪ್ರಾಧ್ಯಾಪಕರಿಗೆ ವಹಿಸಬೇಕು. ಸಾಧ್ಯವಾದರೆ, ಅವರ ವೇತನ ಹೆಚ್ಚಳ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ’ ಎಂದು ಕವಿವಿ ಮೂಲಗಳು ತಿಳಿಸಿವೆ.