* ಮಹಾಜನ್ ಆಯೋಗವೇ ಅನವಶ್ಯಕ ಎಂದು ನಂಬೂದಿರಿಪಾಡ್
ತಿರುವನಂತಪುರ, ಜೂ. 23– 1956ರ ರಾಜ್ಯಗಳ ಪುನರ್ವಿಂಗಡನೆ ಕಾನೂನನ್ನು ಬಿಟ್ಟರೆ ಬೇರಿನ್ಯಾವ ಆಧಾರವೂ ಇಲ್ಲದ ಕಾರಣ ಮಹಾಜನ್ ಆಯೋಗದ ರಚನೆಯೇ ತತ್ವರಹಿತವಾಗಿದೆಯೆಂದು ಕೇರಳ ಸರ್ಕಾರವು ಭಾರತ ಸರ್ಕಾರ ಹಾಗೂ ಮಹಾಜನ್ ಆಯೋಗಕ್ಕೆ ತಿಳಿಸಿದೆಯೆಂದು ಮುಖ್ಯಮಂತ್ರಿ ಶ್ರೀ ನಂಬೂದಿರಿಪಾಡ್ ಇಂದು ರಾಜ್ಯ ವಿಧಾನಸಭೆಗೆ ತಿಳಿಸಿದರು.