ಉಡುಪಿ: ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ವಸ್ಥವೃತ್ತ ವಿಭಾಗದ ಉಸ್ತುವಾರಿಯಲ್ಲಿ ಒಂದು ವಾರದ ಕಾಲ ಯೋಗಾಭ್ಯಾಸ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲ ಡಾ.ಯು ಶ್ರೀಕಾಂತ್, ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ. ಬಿ.ಆರ್. ದೊಡ್ಡಮನಿ, ಯೋಗ ಉಪನ್ಯಾಸಕಿ ರೂಪ ಬಲ್ಲಾಳ್, ಸ್ವಸ್ಥವೃತ್ತ ವಿಭಾಗ ಡಾ. ವಿಜಯ್ ಬಿ. ನೆಗಳೂರು, ಸಹಾಯಕ ಪ್ರಾಧ್ಯಾಪಕ ಡಾ. ಯೋಗೀಶ್ ಆಚಾರ್ಯ, ಡಾ. ಸಂದೇಶ್ ಕುಮಾರ್ ಶೆಟ್ಟಿ ಇದ್ದರು.