ಐಜಿಪಿ ಎಂ.ಚಂದ್ರಶೇಖರ್, ‘ನನ್ನ ಜನ್ಮಭೂಮಿ ಆಂಧ್ರಪ್ರದೇಶವಾಗಿದ್ದರೂ, ಕರ್ಮಭೂಮಿ ಕರ್ನಾಟಕ. ಇಲ್ಲಿ ಕೆಲಸ ಮಾಡುತ್ತಾ, ನೀರು, ಗಾಳಿ, ಅನ್ನವನ್ನು ಸೇವಿಸುವ ನಾವು ಕೃತಜ್ಞತೆ ಸಲ್ಲಿಸುವುದಕ್ಕಾದರೂ ಕನ್ನಡ ಭಾಷೆಯನ್ನು ಕಲಿಯಬೇಕು. ಇದನ್ನು ಮಾತಿನಲ್ಲಿ ಹೇಳಿದರೆ ಸಾಲದು, ಕಾರ್ಯರೂಪಕ್ಕೆ ತರಬೇಕು. ಸೇವೆಗೆ ಸೇರಿದ ಮೂರು ತಿಂಗಳಲ್ಲಿ ಕನ್ನಡ ಓದುವುದು, ಬರೆಯುವುದು ಹಾಗೂ ಮಾತನಾಡುವುದನ್ನು ಕಲಿತೆ. ಅದಕ್ಕೆ ದೃಢಸಂಕಲ್ಪ ಬೇಕು’ ಎಂದು ಹೇಳಿದರು.