ಹರಕೆ ಹೊತ್ತಿದ್ದ ಭಕ್ತರು ಕಾಯಿ, ಬೆಲ್ಲ, ತುಪ್ಪ, ಅಕ್ಕಿ, ಧಾನ್ಯಗಳನ್ನು ಸಮರ್ಪಿಸಿದರು. ಬೆಳ್ಳಿಯ ಬಾಬಾ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿದರು. ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನ ಹಾಗೂ ಸಂಜೆ ಧೂಪದಾರತಿ, ರಾತ್ರಿ ಶೇಜಾರತಿ, ಗುರುಗಳ ಪಾದುಕೆಗಳಿಗೆ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ ನಡೆಯಿತು ಎಂದು ಸಾಯಿ ಟ್ರಸ್ಟ್ನ ನಿರ್ದೇಶಕ ಶಾಮನೂರು ವಿರೂಪಾಕ್ಷಪ್ಪ ತಿಳಿಸಿದರು.