ಅಲ್ಲಿಂದ ಗ್ರಾಮದೇವತೆ, ಶಿವಭವಾನಿ ಮಂದಿರ, ಅಂಬಾಭವಾನಿ ಮಂದಿರ, ಖಾಸ್ಗತೇಶ್ವರ ಮಠ, ಹನುಮಾನ ಮಂದಿರ, ಮರಗಮ್ಮ ದೇವಸ್ಥಾನ, ದುರ್ಗಮ್ಮ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಿಗೆ ತೆರಳಿ ನೀರೆರೆದು ಮಹಾ ಪೂಜೆ ಸಲ್ಲಿಸಿದರು. ಸಂಜೆ ಐದು ಕುದುರೆಗಳನ್ನು ವಿವಿಧ ವಾದ್ಯ ವೈಭವಗಳೊಂದಿಗೆ ಪಂಚಶ ಹೀದ್ ಕೆರೆಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.