‘ಕೆಲವು ದಿನಗಳ ಹಿಂದೆ ಈ ಸ್ಥಳವನ್ನು ಪ್ರಭಾವಿ ವ್ಯಕ್ತಿಗಳು ಕಬಳಿಸಲು ನೋಡಿದಾಗ ಸಾರ್ವಜನಿಕರು ಪ್ರತಿಭಟಿಸಿದ ಕಾರಣ ಶೌಚಾಲಯ ಉಳಿದಿದೆ. ಆದರೆ, ಈ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಯುವತಿಯರು, ಮಕ್ಕಳು, ಕಾಯಿಲೆ ಬಿದ್ದವರು, ವಯಸ್ಸಾದವರು ಶೌಚಕ್ಕೆ ದೂರದ ಬಯಲಿಗೆ ಹೋಗುವುದು ಕಷ್ಟವಾಗಿದೆ. ಬಹಿರ್ದೆಸೆಗೆ ಹೋಗುವುದೇ ಅಸಹ್ಯ ಎನಿಸುವಂತಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಗುರುಸಿದ್ಧಮ್ಮ .