ಮಜ್ಜೂರು, ಶೆಟ್ಟಿಕೇರಿ, ಲಕ್ಷ್ಮೇಶ್ವರ, ಬಾಲೆಹೊಸೂರು, ಸೂರಣಗಿ, ಬಸಾ ಪುರ, ರಾಮಗಿರಿ ಸೇರಿ ಇನ್ನಿತರ ಊರು ಗಳಲ್ಲಿನ ದೊಡ್ಡ ದೊಡ್ಡ ಕೆರೆಗಳು ಈಗಲೂ ಖಾಲಿ ಇದ್ದು ಬರದ ಭೀಕರತೆಯನ್ನು ಸಾರುತ್ತಿವೆ. ಕಳೆದ ವರ್ಷವೂ ಸಹ ಮಳೆಕಣ್ಣಾಮುಚ್ಚಾಲೆಯಿಂದಾಗಿ ಕೆರೆಕಟ್ಟೆ ಗಳು ತುಂಬದೆ ಜನತೆ ನೀರಿನ ಬವಣೆ ಅನುಭವಿಸಿದ್ದಾರೆ. ಈ ವರ್ಷವೂ ಸಹ ಅದೇ ಪರಿಸ್ಥಿತಿ ಮುಂದುವರೆದಿದ್ದು ಜನರಲ್ಲಿ ಭಯ ಮೂಡಿಸಿದೆ. ಲಕ್ಷ್ಮೇಶ್ವರ ಸಮೀಪದ ಬಸಾಪುರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಮೂಲವಾಗಿದ್ದ ಕೆರೆ ಅಂಗಳ ಖಾಲಿ ಇದ್ದು ಗ್ರಾಮಸ್ಥರಲ್ಲಿ ಚಿಂತೆ ಮೂಡಿಸಿದೆ.