ದೊಡ್ಡಬಳ್ಳಾಪುರ: ‘ನಗರದ 6ನೇ ವಾರ್ಡ್ ರಂಗಪ್ಪ ಸರ್ಕಲ್ ಸಮೀಪ ತಿಗಳೆಬಾಗಾಯ್ತು ಸರ್ವೇ ನಂ.47, 81,82,83ರ ಸ್ವತ್ತಿನ ಮುಂಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆ ಮೇಲೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ ಎನ್ನುವ ದೂರಿನ ಮೇರೆಗೆ ಲೋಕಾಯುಕ್ತ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.