ಚೊಳಚಗುಡ್ಡ (ಬಾದಾಮಿ): ‘ನಮ್ಮ ದೇಶದ ಮೇಲೆ ಶತ್ರು ದೇಶಗಳಿಂದ ನಿರಂತರವಾಗಿ ದಾಳಿ ನಡೆದರೂ, ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಗುಣವನ್ನು ಹೊಂದಿದೆ’ ಎಂದು ಅತಿಥಿಯಾಗಿ ಪ್ರಾಚಾರ್ಯ ಜಿ.ಜಿ. ಹಿರೇಮಠ ಹೇಳಿದರು. ಚೊಳಚಗುಡ್ಡ ಗ್ರಾಮದ ಹೊಸಬೆಳಕು ಸಾಂಸ್ಕೃತಿಕ ಹಾಗೂ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ವೀರಮರಣವನ್ನಪ್ಪಿದ ವೀರಯೋಧ ಶಿವಬಸಯ್ಯ ಕುಲಕರ್ಣಿ ಸ್ಮರಣಾರ್ಥ ಬುಧವಾರ ಜರುಗಿದ ಕಾರ್ಗಿಲ್ ವಿಜಯೋತ್ಸವ, ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.